alex Certify ಮುಸ್ಲಿಂ, ಕ್ರಿಶ್ಚಿಯನ್ನರಿಗಿರುವ ಅವಕಾಶ ಹಿಂದೂಗಳಿಗೇಕಿಲ್ಲ..? ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ, ಕ್ರಿಶ್ಚಿಯನ್ನರಿಗಿರುವ ಅವಕಾಶ ಹಿಂದೂಗಳಿಗೇಕಿಲ್ಲ..? ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಪ್ರಶ್ನೆ

ಕೊರೊನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಹಬ್ಬಗಳ ಅದ್ಧೂರಿ ಆಚರಣೆಗಳಿಗೆ ಬ್ರೇಕ್​ ಬಿದ್ದಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಗಣೇಶೋತ್ಸವ ಅದ್ಧೂರಿ ಆಚರಣೆಗೆ ಅನುಮತಿ ಸಿಗೋದು ಬಹುತೇಕ ಅನುಮಾನವೇ ಎಂಬಂತಾಗಿದೆ. ಆದರೆ ಸರ್ಕಾರದ ಈ ಯೋಚನೆಗೆ ಸ್ವತಃ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ.

ಮೈಸೂರಿನಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದಾರೋ ಇಲ್ಲವೋ..? ಚರ್ಚ್​ಗಳಲ್ಲಿ ಭಾನುವಾರ ಜನ ಸೇರುತ್ತಿದ್ದಾರೋ ಇಲ್ಲವೋ..? ಅಲ್ಲೆಲ್ಲ ಅವಕಾಶ ಕೊಡುತ್ತಿದ್ದೀರಿ ಎಂದಾದ ಮೇಲೆ ಗಣೇಶೋತ್ಸವಕ್ಕೂ ಅವಕಾಶ ನೀಡಿ. ನಮಗೇನೂ ಅದ್ಧೂರಿ ಆಚರಣೆ ಬೇಡ. ಆದರೆ ಉತ್ಸವ ನಡೆಯಲೇಬೇಕು. ಕೋವಿಡ್​ ನಿಯಮಾವಳಿಗಳನ್ನು ಅನುಷ್ಠಾನ ಮಾಡಿಯೇ ಅವಕಾಶ ಮಾಡಿಕೊಡಿ. ಸಿಎಂ ಬಸವರಾಜ ಬೊಮ್ಮಾಯಿ ಈ ಎಲ್ಲಾ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆಂಬ ನಂಬಿಕೆ ಇದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...