ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ, ಏಕೆಂದರೆ ಭಾರತದ 15 ಮಂದಿಯ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ಅವರನ್ನು ಕಡೆಗಣಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಸಿರಾಜ್ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ದಂತಕಥೆ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜಾನೈ ಅವರೊಂದಿಗೆ ಇದ್ದರು.
ವೈರಲ್ ವಿಡಿಯೋದಲ್ಲಿ, ಇಬ್ಬರೂ ಜಾನೈ ಅವರ ಹೊಸ ಸಂಗೀತ ಆಲ್ಬಮ್ನಿಂದ ‘ಕೆಹಂಡಿ ಹೈ’ ಹಾಡಿನ ಕೆಲವು ಸಾಲುಗಳನ್ನು ಹಾಡುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪ್ರಾರಂಭದ ಮುನ್ನಾದಿನದಂದು, ಸಿರಾಜ್ ಪವಿತ್ರ ನಗರವಾದ ಮೆಕ್ಕಾಗೆ ಉಮ್ರಾ ನಿರ್ವಹಿಸಲು ಪ್ರವಾಸ ಕೈಗೊಂಡಿದ್ದು, ರಂಜಾನ್ ಪವಿತ್ರ ತಿಂಗಳು ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಸಿರಾಜ್ ಯಾತ್ರೆ ತೆರಳಿದ್ದಾರೆ. ಮೆಕ್ಕಾಗೆ ಭೇಟಿ ನೀಡಿದ ಚಿತ್ರವನ್ನು ಸಿರಾಜ್ ಹಂಚಿಕೊಂಡಿದ್ದಾರೆ.
ಜಾನೈ ಕೂಡ ಮೂರು ಹೃದಯದ ಎಮೋಜಿಗಳೊಂದಿಗೆ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಜಾನೈ ಮತ್ತು ಸಿರಾಜ್ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದಾಗ್ಯೂ, ವದಂತಿಗಳು ದೊಡ್ಡ ವಿಷಯವಾಗುವ ಮೊದಲು, ಜಾನೈ ಸಿರಾಜ್ ಅವರೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ಸ್ಪಷ್ಟಪಡಿಸಿದ್ದರು, ಅವರನ್ನು “ಮೇರೆ ಪ್ಯಾರೆ ಭಾಯಿ (ನನ್ನ ಪ್ರೀತಿಯ ಸಹೋದರ)” ಎಂದು ಕರೆದಿದ್ದರೆ, ಸಿರಾಜ್ ಕೂಡ, ಅವರನ್ನು “ಬೆಹನಾ” ಎಂದು ಕರೆದಿದ್ದರು.
View this post on Instagram