alex Certify ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಹಾಕಿ ಸರ್ಕಾರಿ ನೌಕರ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಹಾಕಿ ಸರ್ಕಾರಿ ನೌಕರ ನಾಪತ್ತೆ

ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗದಲ್ಲಿ ಸರ್ಕಾರಿ ನೌಕರರು ನಾಪತ್ತೆಯಾಗಿದ್ದಾರೆ. ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಾಪತ್ತೆಯಾದವರು.

ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಹಾಕಿ ಅವರು ನಾಪತ್ತೆಯಾಗಿದ್ದಾರೆ. ಅವರ ಪತ್ನಿ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಮೊಗ್ಗ ನಗರದ ಸೋಮಯ್ಯ ಲೇಔಟ್ ಮನೆಯಿಂದ ಬುಧವಾರ ಬೆಳಗ್ಗೆ 7:45 ರಿಂದ ಪ್ರಭಾಕರ್ ನಾಪತ್ತೆಯಾಗಿದ್ದಾರೆ. ಆರು ತಿಂಗಳ ಹಿಂದೆ ಎಫ್.ಡಿ.ಎ. ಹುದ್ದೆಯಿಂದ ಎಸ್.ಡಿ.ಎ. ಹುದ್ದೆಗೆ ಹಿಂಬಡ್ತಿ ನೀಡಲಾಗಿತ್ತು. ಆರು ತಿಂಗಳಿನಿಂದ ಸಂಬಳ ಕೂಡ ಆಗಿರಲಿಲ್ಲ. ಇದರಿಂದ ಅವರು ಮನನೊಂದಿದ್ದರು ಎನ್ನಲಾಗಿದೆ.

ಅವರು ವಾಟ್ಸಾಪ್ ನಲ್ಲಿ ಕಳುಹಿಸಿದ ಸಂದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸೇರಿದಂತೆ ಹಲವರ ಹೆಸರು ಉಲ್ಲೇಖಿಸಲಾಗಿದೆ. ಮೆಸೇಜ್ ಮಾಡಿದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...