alex Certify ಎರಡು ತಿಂಗಳ ನಂತರ ಬಯಲಾಯ್ತು ಬಾಲಕಿ ಸಾವಿನ ರಹಸ್ಯ: ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಿಂಗಳ ನಂತರ ಬಯಲಾಯ್ತು ಬಾಲಕಿ ಸಾವಿನ ರಹಸ್ಯ: ಆರೋಪಿ ಅರೆಸ್ಟ್

ಕೊಪ್ಪಳ: ಎರಡು ತಿಂಗಳ ನಂತರ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಅನುಶ್ರೀ(7) ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಿದ್ದಲಿಂಗಯ್ಯ ಬಂಧಿತ ಆರೋಪಿ: ಗುಟ್ಕಾ ತಂದು ಕೊಡದಿದ್ದಕ್ಕೆ ಸಿದ್ದಲಿಂಗಯ್ಯ ಬಾಲಕಿ ಕೊಲೆ ಮಾಡಿದ್ದ. ಏಪ್ರಿಲ್ 18ರಂದು ಮಧ್ಯಾಹ್ನ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಬಾಲಕಿ ಪಕ್ಕದ ಮನೆ ನಿವಾಸಿಯಾಗಿರುವ ಸಿದ್ದಲಿಂಗಯ್ಯ ಗುಟ್ಕಾ ತಂದು ಕೊಡುವಂತೆ ಹೇಳಿದ್ದಾನೆ. ತಂದು ಕೊಡದಿದ್ದಾಗ ಕೋಲಿನಿಂದ ಬಾಲಕಿ ತಲೆಗೆ ಹೊಡೆದಿದ್ದು, ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಸಾಕ್ಷಿ ಸಿಗದಂತೆ ಶವವನ್ನು ಗೊಬ್ಬರ ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಹುಡುಕಾಟದ ನಂತರ ಪಾಳುಬಿದ್ದ ಮನೆ ಬಳಿ ಶವವಾಗಿ ಬಾಲಕಿ ಪತ್ತೆಯಾಗಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...