alex Certify 500 ರೂ. ಸಾಲ ಪಡೆದು ಆರಂಭಿಸಿದ ಉದ್ಯಮದಲ್ಲೀಗ 5 ಕೋಟಿ ರೂ. ವ್ಯವಹಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂ. ಸಾಲ ಪಡೆದು ಆರಂಭಿಸಿದ ಉದ್ಯಮದಲ್ಲೀಗ 5 ಕೋಟಿ ರೂ. ವ್ಯವಹಾರ…!

ಮೂರಂಕಿ, ನಾಲ್ಕಂಕಿ ರೂಪಾಯಿಯಿಂದ ಶುರುವಾದ ಸಣ್ಣ ಉದ್ಯಮಗಳು ಇಂದು ಕೋಟಿ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ. ಅಂತಹ ಸ್ಫೂರ್ತಿದಾಯಕ ಯಶಸ್ಸಿನ ಕಥೆಗಳಲ್ಲಿ ಕೃಷ್ಣ ಯಾದವ್ ಅವರ ಕಥೆಯು ಪರಿಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಕೃಷ್ಣ ಅವರು 1990 ರ ದಶಕದ ಮಧ್ಯಭಾಗದಲ್ಲಿ ತೀವ್ರ ಆರ್ಥಿಕ ತೊಂದರೆಗಳನ್ನು ಅನುಭವಿಸಿದ್ದರು. ಕಷ್ಟಗಳ ನಡುವೆಯೂ ಅವರು ರಿಸ್ಕ್ ತೆಗೆದುಕೊಂಡು ತನ್ನ ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ತನ್ನ ಕುಟುಂಬದೊಂದಿಗೆ ದೆಹಲಿಗೆ ಸ್ಥಳಾಂತರವಾದರು.

ಕೃಷ್ಣ ಮತ್ತು ಅವರ ಪತಿ ನಿರುದ್ಯೋಗಿಗಳಾಗಿದ್ದಾಗ ಸಣ್ಣ ಜಮೀನು ಬಾಡಿಗೆ ಪಡೆದು ತರಕಾರಿ ಬೆಳೆಯುವ ನಿರ್ಧಾರ ಮಾಡಿದರು. ಆಕೆ ತನ್ನ ಸಂಪನ್ಮೂಲ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬಳಸಿಕೊಂಡು, ಉಪ್ಪಿನಕಾಯಿ ತಯಾರು ಮಾಡಲು ಪ್ರಾರಂಭಿಸಿದರು. ಆರಂಭದಲ್ಲಿ ಕೇವಲ ಮೂರು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ ನಂತರ ಕೋಟಿ ಕೋಟಿ ಹಣ ಸಂಪಾದನೆಗೆ ಮುಂದಾದರು.

ಉಪ್ಪಿನಕಾಯಿ ವ್ಯಾಪಾರ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗುವ ಅಪಾಯವನ್ನು ಗುರುತಿಸಿದ ಕೃಷ್ಣ, ತಾವೇ ಮಾರುಕಟ್ಟೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಅವರು ತನ್ನ ಉತ್ಪನ್ನಗಳನ್ನು ಬೀದಿಗಳಲ್ಲಿ ವೈಯಕ್ತಿಕವಾಗಿ ಮಾರಾಟ ಮಾಡುವ ಮೂಲಕ ನೇರ ಮಾರಾಟದ ಪ್ರವರ್ತಕರಾದರು.

ನಂತರ ಕೃಷ್ಣ ಅವರ ಅಚಲವಾದ ಬದ್ಧತೆ ಮತ್ತು ಚಾಣಾಕ್ಷ ವ್ಯವಹಾರದ ಕುಶಾಗ್ರಮತಿಯು ಅವರ ಉದ್ಯಮವಾದ ‘ಶ್ರೀ ಕೃಷ್ಣ ಪಿಕಲ್ಸ್’ ಅಗಾಧವಾಗಿ ಬೆಳೆಯಲು ಕಾರಣವಾಯಿತು. ಇದೀಗ ಕಂಪನಿಯು ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವಾಗಿ ಬೆಳೆದಿದೆ, 100 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ 5 ಕೋಟಿ ರೂಪಾಯಿ ಮೀರಿದ ಪ್ರಭಾವಶಾಲಿ ವಹಿವಾಟು ಸಾಧಿಸಿದೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2015 ರ ನಾರಿ ಶಕ್ತಿ ಸಮ್ಮಾನ್ ಪ್ರಶಸ್ತಿ ನೀಡಿ ಕೃಷ್ಣ ಯಾದವ್ ಅವರನ್ನು ಗೌರವಿಸಿದೆ.

ಕೃಷ್ಣ ಯಾದವ್ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಅವರ ಸಂಕಲ್ಪ ಮತ್ತು ದೃಢತೆಯ ಶಕ್ತಿಯು ಅವರನ್ನು ಉದ್ಯಮಿಯನ್ನಾಗಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...