alex Certify ಮಂತ್ರಾಲಯ ಗುರು ರಾಯರ ಮಠಕ್ಕೆ ಹರಿದು ಬಂತು 3.39 ಕೋಟಿಗೂ ಅಧಿಕ ಕಾಣಿಕೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಾಲಯ ಗುರು ರಾಯರ ಮಠಕ್ಕೆ ಹರಿದು ಬಂತು 3.39 ಕೋಟಿಗೂ ಅಧಿಕ ಕಾಣಿಕೆ!

ರಾಯಚೂರು: ಕಲಿಯುಗದ ಕಾಮಧೇನು,ಕಲ್ಪವೃಕ್ಷ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಈ ಬಾರಿ ಬರೋಬ್ಬರಿ 3.39 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ಈ ತಿಂಗಳು ಗುರುವೈಭವೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠಕ್ಕೆ ರಾಜ್ಯ-ಹೊರರಾಜ್ಯ, ದೇಶ-ವಿದೇಶಗಳಿಂದ ಭಕ್ತಸಾಗರವೇ ಹರಿದುಬಂದಿದ್ದು, ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹಾಗೂ ಚಿನ್ನಾಭರಣ ಸಮರ್ಪಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ 3 ಕೋಟಿ 39 ಲಕ್ಷ 35 ಸಾವಿರದ 121 ರೂಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ 9 ಲಕ್ಷ 34 ಸಾವಿರದ 500 ರೂಪಾಯಿ ನಾಣ್ಯಗಳು, 3 ಕೋಟಿ 48 ಲಕ್ಷದ 69 ಸಾವಿರದ 621 ರೂಪಾಯಿ ನೋಟುಗಳು ಇವೆ. 37.200 ಗ್ರಾಂ ಚಿನ್ನ, 1280 ಕೆಜಿ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...