alex Certify ದೇಸೀ ನೆಟ್ಟಿಗರ ಹೃದಯಲ್ಲಿ ಧೂಳೆಬ್ಬಿಸಿದ ಲಂಕನ್ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಸೀ ನೆಟ್ಟಿಗರ ಹೃದಯಲ್ಲಿ ಧೂಳೆಬ್ಬಿಸಿದ ಲಂಕನ್ ಹಾಡು

ಕಲೆ ಹಾಗೂ ಸಂಗೀತದ ವಿಚಾರಕ್ಕೆ ಬಂದಾಗ ಭೌಗೋಳಿಕ ಎಲ್ಲೆಗಳೆಲ್ಲಾ ಅಳಿಸಿಹೋಗುತ್ತವೆ ಎನ್ನುವ ಮಾತಿಗೆ ಹೊಸ ನಿದರ್ಶನವೊಂದು ಸದ್ದು ಮಾಡುತ್ತಿದೆ.

ಶ್ರೀಲಂಕಾದ ಕಲಾವಿದರು ರಚಿಸಿರುವ ಸಿಂಹಳ ಹಾಡು ’ಮನಿಕೆ ಮಾಗೆ ಹಿತೆ’ ಹಾಡಿಗೆ ದೇಸೀ ನೆಟ್ಟಿಗರು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಈ ಹಾಡಿಗೆ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್‌ರಿಂದ ಮಾಧುರಿ ದೀಕ್ಷಿತ್‌ ವರೆಗೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.

ಬಹಳ ಕ್ಯಾಚಿ ಲಿರಿಕ್ಸ್‌ನೊಂದಿಗೆ ಎಲ್ಲೆಡೆ ಹವಾ ಎಬ್ಬಿಸಿರುವ ಈ ಹಾಡಿಗೆ ಲಂಕಾದ ರ‍್ಯಾಪರ್‌-ಗಾಯಕ ಯೊಹಾನಿ ದನಿ ನೀಡಿದ್ದಾರೆ. ಆದರೆ ಇದು 2020ರಲ್ಲಿ ನಿರ್ಮಾಣವಾದ ಒರಿಜಿನಲ್ ಹಾಡಿನ ಕವರ್‌ ಮಾತ್ರ ಎಂಬುದು ಬಹಳ ಮಂದಿಗೆ ಇನ್ನೂ ತಿಳಿದಿಲ್ಲ.

ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಯಾಗಿದ್ದ ಈ ಹಾಡಿಗೆ ಸತೀಶನ್ ದನಿ ನೀಡಿದ್ದು, ರ‍್ಯಾಪರ್‌ ದುಲನ್ ಸಹ ಸೇರಿದ್ದಾರೆ. ಹಸಿತ್‌ ಆರ್ಯನ್ ನಿರ್ದೇಶಿಸಿದ ಈ ಹಾಡಿನಲ್ಲಿ ನಟಿಯರಾದ ಮಧುಶಿ ಸೋಯ್ಸಾ, ಕಸುನ್ ತರಾಕಾ ಹಾಗೂ ರುವಾನ್ ಪ್ರಿಯದರ್ಶನಾ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವರ್ಷದ ಮೇನಲ್ಲಿ ಹಾಡಿನ ಡ್ಯುಯೆಟ್ ಕವರ್‌ ಅನ್ನು ಒರಿಜಿನಲ್ ಗಾಯಕ ಸತೀಶನ್‌ ದನಿಯಲ್ಲಿ ಬಿಡುಗಡೆ ಮಾಡಿದಾಗಿನಿಂದ ಭಾರತದಲ್ಲಿ ಅಮೇಜ಼ಾನ್ ಮ್ಯೂಸಿಕ್ ಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಯೂಟ್ಯೂಬ್‌ನಲ್ಲೂ ಸಹ ಹಾಡಿಗೆ 10 ಕೋಟಿಗೂ ಅಧಿಕ ವೀವ್ಸ್ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...