alex Certify ʼನಾಲ್ವರು ಮಕ್ಕಳು…. ನಾಲ್ಕು ಜಿಲ್ಲೆʼ…..! ಸೋಲದೇವನಹಳ್ಳಿ ಮಕ್ಕಳ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ಮಂಗಳೂರು ಡಿಸಿಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾಲ್ವರು ಮಕ್ಕಳು…. ನಾಲ್ಕು ಜಿಲ್ಲೆʼ…..! ಸೋಲದೇವನಹಳ್ಳಿ ಮಕ್ಕಳ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ಮಂಗಳೂರು ಡಿಸಿಪಿ

ಪೋಷಕರು ಓದಲು ಪೀಡಿಸುತ್ತಾರೆ ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದ ಏಳು ಮಂದಿ ಮಕ್ಕಳು ಕೊನೆಗೂ ಪತ್ತೆಯಾಗಿದ್ದಾರೆ. ನಿನ್ನೆ ಮೂವರು ಮಕ್ಕಳು ಪತ್ತೆಯಾಗಿದ್ದರೆ ಇಂದು ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿ ಅಪಾರ್ಟ್​ಮೆಂಟ್​ನಿಂದ ನಾಪತ್ತೆಯಾಗಿದ್ದ ಮಕ್ಕಳು ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು.

ಇನ್ನು ಮಂಗಳೂರಿನಲ್ಲಿ ಪತ್ತೆಯಾದ ಮಕ್ಕಳ ಬಗ್ಗೆ ಮಂಗಳೂರು ಡಿಸಿಪಿ ಹರಿರಾಮ್​ ಶಂಕರ್​ ಪ್ರತಿಕ್ರಿಯಿಸಿದ್ದಾರೆ. ಮಕ್ಕಳು ಒಟ್ಟಿಗೆ ಇರಬೇಕು ಹಾಗೂ ಹಾಸ್ಟೆಲ್​ಗೆ ಕಳುಹಿಸಿ ಬೇರೆ ಮಾಡುತ್ತಾರೆ ಎಂಬ ಕಾರಣಕ್ಕೆ ತಾವು ಮನೆ ಬಿಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ಆಗಬೇಕಿದೆ. ಮಕ್ಕಳ ಜೊತೆಯಲ್ಲಿ ಇರುವ ಯುವತಿಯ ಇರಾದೆ ಏನಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ರು.

ದುರ್ಗಾ ಮಾತೆ ಪೆಂಡಾಲ್‌ ನಲ್ಲಿ ವಲಸಿಗರ ಸಮಸ್ಯೆ ವಿವರಿಸುವ ಥೀಮ್

ಮಂಗಳೂರಿಗೆ ಬಂದ ಇವರು ಚಿನ್ನಾಭರಣ ತುಂಬಿದ್ದ ಬ್ಯಾಗ್​ಗಳನ್ನು ಎಸೆಯಲು ಯತ್ನಿಸಿದ್ದರು. ಇದು ಸ್ಥಳೀಯರಿಗೆ ಅನುಮಾನ ಮೂಡುವಂತೆ ಮಾಡಿದೆ. ಸದ್ಯ ಈ ಬ್ಯಾಗುಗಳನ್ನು ವಶಕ್ಕೆ ಪಡೆದಿದ್ದೇವೆ. ಮಂಗಳೂರಿಗೆ ಬಂದ ಮೇಲೆ ಹಣ ಖಾಲಿ ಆಗಿದೆ. ಹೀಗಾಗಿ ಸಂಬಂಧಿಕರಿಗೆ ಕರೆ ಕೂಡ ಮಾಡಿದ್ದಾರೆ. ಇವರೆಲ್ಲ ಹಳ್ಳಿಯ ಜೀವನ ನಡೆಸಬೇಕೆಂದು ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಆದರೆ ತನಿಖೆ ಬಳಿಕವಷ್ಟೇ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...