alex Certify ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ

ಹಾಸನ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲೇ ಯುವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಪೂಜಾ(20) ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಸಕಲೇಶಪುರದ ಅಶ್ವತ್ಥ್ ನನ್ನು ಪೂಜಾ ಪ್ರೀತಿಸಿದ್ದು, ಐದು ತಿಂಗಳ ಹಿಂದೆ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು.

ಇವರ ಪ್ರೀತಿಯ ವಿಚಾರ ತಿಳಿದ ಪೂಜಾ ಪೋಷಕರು ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರಾದರೂ, ಪೂಜಾ ಮತ್ತು ಅಶ್ವತ್ಥ್ ಮದುವೆಯಾಗಿ ಸಕಲೇಶಪುರದಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ ಸಕಲೇಶಪುರದ ಹೇಮಾವತಿ ಸೇತುವೆಯಿಂದ ನದಿಗೆ ಹಾರಿದ ಪೂಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಕೆಯ ಪೋಷಕರು ಗಂಡನ ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ. ಸಕಲೇಶಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...