alex Certify ಉತ್ತರ ಪ್ರದೇಶ ಚುನಾವಣೆ ಬಿಗ್ ಸರ್ಪ್ರೈಸ್: ರೈತರ ಹತ್ಯೆಗೆ ಸುದ್ದಿಯಾಗಿದ್ದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್; ಎಲ್ಲಾ 8 ಸ್ಥಾನಗಳಲ್ಲಿ ಗೆಲುವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶ ಚುನಾವಣೆ ಬಿಗ್ ಸರ್ಪ್ರೈಸ್: ರೈತರ ಹತ್ಯೆಗೆ ಸುದ್ದಿಯಾಗಿದ್ದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್; ಎಲ್ಲಾ 8 ಸ್ಥಾನಗಳಲ್ಲಿ ಗೆಲುವು

ಕೇಂದ್ರ ಸಚಿವ ಆಶಿಶ್ ಮಿಶ್ರಾ ಅವರ ರ್ಯಾಲಿಯಲ್ಲಿ ರೈತರ ಹತ್ಯೆಯ ಬಗ್ಗೆ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮತದಾರರು ಬಿಜೆಪಿಗೆ ಹೆಚ್ಚಿನ ಮತ ಹಾಕಿ ಭಾರಿ ಬೆಂಬಲ ನೀಡಿದ್ದಾರೆ.

ಇಲ್ಲಿನ ಎಲ್ಲ 8 ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಈ ಜಿಲ್ಲೆಯಲ್ಲಿ 8 ವಿಧಾನಸಭಾ ಸ್ಥಾನಗಳಿವೆ.

ಪಾಲಿಯಾ

ಬಿಜೆಪಿಯ ಹರ್ವಿಂದರ್ ಸಿಂಗ್ ಸಾಹ್ನಿ ಅವರು ಲಖಿಂಪುರ ಖೇರಿಯ ಪಾಲಿಯಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ನಿಘಾಸನ್

ಬಿಜೆಪಿಯ ಶಶಾಂಕ್ ವರ್ಮಾ ಅವರು ಸಮಾಜವಾದಿ ಪಕ್ಷದ ಆರ್ ಎಸ್ ಕುಶ್ವಾಹಾ ಅವರನ್ನು ಸೋಲಿಸಿದ್ದಾರೆ.

ಗೋಲ ಗೋರಖ್ನಾಥ್

ಗೋರಖ್ ನಾಥದಲ್ಲಿ ಬಿಜೆಪಿಯ ಅರವಿಂದ್ ಗಿರಿ ಗೆದ್ದಿದ್ದಾರೆ, ಅವರು ಬಿಜೆಪಿಯ ವಿನಯ್ ತಿವಾರಿ ಅವರನ್ನು ಸೋಲಿಸಿದ್ದಾರೆ.

ಶ್ರೀನಗರ

ಶ್ರೀನಗರ ಕ್ಷೇತ್ರದಿಂದ ಬಿಜೆಪಿಯ ಮಂಜು ತ್ಯಾಗಿ ಸಮಾಜವಾದಿ ಪಕ್ಷದ ರಾಮ್ ಚರಣ್ ಅವರನ್ನು ಸೋಲಿಸಿದ್ದಾರೆ.

ಲಖಿಂಪುರ ಸದರ್

ಬಿಜೆಪಿಯ ಯೋಗೇಶ್ ವರ್ಮಾ ಅವರು ಲಖಿಂಪುರ ಸದರ್ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಕಾಸ್ತಾ

ಬಿಜೆಪಿಯ ಸೌರವ್ ಸಿಂಗ್ ಸೋನು ಅವರು ಕಸ್ತಾ ಕ್ಷೇತ್ರದಿಂದ ಗೆದ್ದಿದ್ದಾರೆ.

ಮೊಹಮ್ಮದಿ

ಬಿಜೆಪಿ ಲೋಕೇಂದ್ರ ಪ್ರತಾಪ್ ಸಿಂಗ್ ಅವರು ಜಯಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...