
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಕದಳಿ ಬಾಳೆಹಣ್ಣಿನಿಂದ ತುಲಾಭಾರ ಅರ್ಪಿಸಿದರು.
ಮಡಂಬು ಕುಂಜುತ್ತನ್ ಸ್ಮೃತಿ ಪರ್ವಂ ಆಯೋಜಿಸಿದ್ದ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಅವರು ಗುರುವಾಯೂರಿಗೆ ಭೇಟಿ ನೀಡಿದ್ದರು.
ತುಲಾಭಾರದ ನಂತರ ಮಾತನಾಡಿದ ಅವರು, ಗುರುವಾಯೂರಿನಲ್ಲಿ ದರ್ಶನ ಪಡೆಯುವುದು ಪದಗಳಿಗೆ ಮೀರಿದ ಆಧ್ಯಾತ್ಮಿಕ ಅನುಭವವಾಗಿದೆ. ತುಲಾಭಾರಕ್ಕೆ ಶ್ರೀಕೃಷ್ಣನಿಗೆ ಪ್ರಿಯವಾದ 83 ಕೆಜಿ ಕದಳಿ ಬಾಳೆಹಣ್ಣುಗಳನ್ನು ಬಳಸಲಾಗಿದೆ ಎಂದರು.