alex Certify BIG NEWS: ನಾಳೆಯೇ ನಿರ್ಧಾರವಾಗುತ್ತಾ ಕೊರೊನಾ ಲಾಕ್​ಡೌನ್​ ವಿಸ್ತರಣೆ ಭವಿಷ್ಯ….? ಮಹತ್ವದ ಸುದ್ದಿಗೋಷ್ಠಿ ಕರೆದ ಸಿಎಂ ಬಿಎಸ್​ವೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಳೆಯೇ ನಿರ್ಧಾರವಾಗುತ್ತಾ ಕೊರೊನಾ ಲಾಕ್​ಡೌನ್​ ವಿಸ್ತರಣೆ ಭವಿಷ್ಯ….? ಮಹತ್ವದ ಸುದ್ದಿಗೋಷ್ಠಿ ಕರೆದ ಸಿಎಂ ಬಿಎಸ್​ವೈ

ರಾಜ್ಯದಲ್ಲಿ ಸದ್ಯ ಕೊರೊನಾ ಲಾಕ್​ಡೌನ್​ ವಿಸ್ತರಣೆ ಬಹುದೊಡ್ಡ ಚರ್ಚಾ ವಿಷಯವಾಗಿ ಬದಲಾಗಿದೆ. ಮೇ 10ರಿಂದ 24ರವರೆಗೆ ಲಾಕ್​ಡೌನ್​ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ವಿಪಕ್ಷಗಳು ಲಾಕ್​ಡೌನ್​ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಮೇಲಿಂದ ಮೇಲೆ ಬೇಡಿಕೆಗಳನ್ನ ಇಡುತ್ತಿದೆ.

ಈ ನಡುವೆ ರಾಜ್ಯದ ವಿವಿಧ ಸಚಿವರೂ ಸಹ ಲಾಕ್​ಡೌನ್​ ವಿಸ್ತರಣೆಯತ್ತ ಒಲವು ತೋರಿದ್ದಾರೆ. ಹೀಗಾಗಿ ಲಾಕ್​ಡೌನ್​ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಎಲ್ಲದರ ನಡುವೆ ಸಿಎಂ ಬಿ.ಎಸ್.​ ಯಡಿಯೂರಪ್ಪ ನಾಳೆ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ನಾಳೆಯ ಸುದ್ದಿಗೋಷ್ಠಿಯಲ್ಲೇ ಲಾಕ್​ಡೌನ್​ ಭವಿಷ್ಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಾರ ಸಚಿವ ಸಂಪುಟ ಸಭೆ ನಿಗದಿಯಾಗಿಲ್ಲ. ಹೀಗಾಗಿ ಲಾಕ್​ಡೌನ್​ ವಿಸ್ತರಣೆ ಕುರಿತಂತೆ ಹಿರಿಯ ಸಚಿವರ ಜೊತೆ ಚರ್ಚಿಸಿ ಸಿಎಂ ನಾಳೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಲಾಕ್​​ಡೌನ್​ ವಿಸ್ತರಣೆ ಮಾಡಿದರೂ ಸಹ ಕೈಗಾರಿಕೆ ಸೇರಿದಂತೆ ಕೆಲ ಆಯ್ದ ವಲಯಗಳಿಗೆ ವಿನಾಯಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಮಾತ್ರವಲ್ಲದೇ ಲಾಕ್​ಡೌನ್​ ಸಂದರ್ಭದಲ್ಲಿ ಜನರ ಜೀವನ ನಿರ್ವಹಣೆಯೂ ಸರ್ಕಾರದ ಜವಾಬ್ದಾರಿಯಾಗಿಯೋದ್ರಿಂದ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟ ಹಾಗೂ ಪಡಿತರ ಚೀಟಿ ಹೊಂದಿರುವವರಿಗೆ ಧವಸ ಧಾನ್ಯಗಳನ್ನ ನೀಡುವ ಬಗ್ಗೆಯೂ ನಾಳೆ ಸಿಎಂ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...