alex Certify ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್​ ಎಂಎಲ್​ಸಿ ಸ್ಫೋಟಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್​ ಎಂಎಲ್​ಸಿ ಸ್ಫೋಟಕ ಹೇಳಿಕೆ

ವಿಧಾನಪರಿಷತ್​ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್​ ಎಂಎಲ್​​ಸಿ ಬಿ. ಎಂ. ಫಾರೂಖ್​ ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್​ ಗಲಾಟೆ ವೇಳೆ ಅವರನ್ನ ಬಲವಂತವಾಗಿ ಖುರ್ಚಿಯಿಂದ ಕೆಳಗಿಳಿಸಲಾಗಿತ್ತು. ಈ ಘಟನೆ ಬಳಿಕ ಅವರು ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಈ ಘಟನೆ ಬಳಿಕ ನಾನು ಧರ್ಮೇಗೌಡರನ್ನ ಭೇಟಿ ಮಾಡಿದ್ದೆ. ಅವರು ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಅವರು ಉಪಸಭಾಪತಿ ಸ್ಥಾನವನ್ನ ಬಯಸಿಯೇ ಇರಲಿಲ್ಲ. ಅವರ ಮುಖಭಾವ ನೋಡ್ತಾ ಇದ್ದ ನನಗೆ ಅವರನ್ನ ಆ ಗಲಾಟೆ ನಡೆಯುವ ದಿನ ಯಾರದ್ದೋ ಮಾತಿನಿಂದ ಪ್ರಭಾವಿತರಾಗಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರು ಎಂದೆನಿಸಿತ್ತು ಅಂತಾ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ರೈಲ್ವೆ ಹಳಿಯ ಬಳಿ ಧರ್ಮೇಗೌಡರ ಮೃತದೇಹ ಲಭ್ಯವಾಗಿತ್ತು. ವಿಧಾನ ಪರಿಷತ್​ ಗಲಾಟೆಯಿಂದ ಮನನೊಂದಿದ್ದ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...