alex Certify ತಪ್ಪಿದ ಸಚಿವ ಸ್ಥಾನ: ‘ಹಳ್ಳಿಹಕ್ಕಿ’ಗೆ ಸಾ.ರಾ. ಮಹೇಶ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಿದ ಸಚಿವ ಸ್ಥಾನ: ‘ಹಳ್ಳಿಹಕ್ಕಿ’ಗೆ ಸಾ.ರಾ. ಮಹೇಶ್ ಟಾಂಗ್

ಚಾಮರಾಜನಗರ: ಇಂದು ನಡೆದ ಸಂಪುಟ ವಿಸ್ತರಣೆಯಲ್ಲಿ ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು, ವಿಶ್ವನಾಥ್ ಅವರಿಗೆ ಗ್ರಾಮದೇವತೆಯ ಶಾಪ ಇದೆ ಎಂದು ಹೇಳಿದ್ದಾರೆ.

ಗ್ರಾಮದೇವತೆಯ ಶಾಪ, ನ್ಯಾಯ ದೇವತೆಯ ತೀರ್ಪು ಇರುವುದರಿಂದ ಸಿಎಂ ಯಡಿಯೂರಪ್ಪ ಏನು ಮಾಡಲು ಸಾಧ್ಯ? ಕಾನೂನಿಗಿಂತ ಅವರು ದೊಡ್ಡವರೇನಲ್ಲ. ಹೀಗಾಗಿ ಮಂತ್ರಿ ಸ್ಥಾನ ಕೈತಪ್ಪಿದೆ ಎಂದು ಹೇಳಿದ್ದಾರೆ.

ಮುಂಬೈಗೆ ಹೋಗಿ ಅವರ ಇಷ್ಟದಂತೆ ಹುಣಸೂರಿನ ಮತದಾರರನ್ನು ಮಾರಾಟ ಮಾಡಿದ್ದಾರೆ. ಈಗ ಯಡಿಯೂರಪ್ಪನವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಯಡಿಯೂರಪ್ಪ ಹೇಳಿರಲಿಲ್ಲವೆ? ಈಗ ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಅವರನ್ನು ಸಿದ್ದಲಿಂಗೇಶ್ವರ ಕ್ಷಮಿಸುವುದಿಲ್ಲ ಎಂದು ವಿಶ್ವನಾಥ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್, ವಿಶ್ವನಾಥ್ ಗೆ ಗ್ರಾಮದೇವತೆಯ ಶಾಪ ಇದೆ. ಅವರು ವೈಯಕ್ತಿಕ ಹಿತಕ್ಕೆ ಗೂಡು ಹುಡುಕಿಕೊಂಡು ಹೋಗುವ ವಲಸೆ ಹಕ್ಕಿ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...