alex Certify ನಾಳೆ ರಾತ್ರಿಯಿಂದ ಮತ್ತೆ ಲಾಕ್ಡೌನ್: ಬೆಂಗಳೂರು ತೊರೆದ ಸಾವಿರಾರು ಜನ ಊರಿಗೆ ಗುಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ರಾತ್ರಿಯಿಂದ ಮತ್ತೆ ಲಾಕ್ಡೌನ್: ಬೆಂಗಳೂರು ತೊರೆದ ಸಾವಿರಾರು ಜನ ಊರಿಗೆ ಗುಳೆ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14 ರಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಈಗಾಗಲೇ ಲಾಕ್ಡೌನ್ ನಿಂದ ತತ್ತರಿಸಿರುವ ಜನತೆಗೆ ಮತ್ತೆ ಲಾಕ್ಡೌನ್ ಜಾರಿ ಮಾಡುವುದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಾವಿರಾರು ಜನ ಊರಿಗೆ ತೆರಳಿದ್ದಾರೆ. ಬೆಳಗ್ಗೆಯಿಂದಲೇ ಊರಿಗೆ ಹೋಗುವವರು ಬಸ್ ನಿಲ್ದಾಣಕ್ಕೆ ಆಗಮಿಸಿ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಬೆಳಿಗ್ಗೆ 5 ಗಂಟೆಗೆ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಇಂದು ಮತ್ತು ನಾಳೆ ಬೆಂಗಳೂರಿನಿಂದ ಸಾವಿರಾರು ಜನ ಮನೆ ಖಾಲಿ ಮಾಡಿಕೊಂಡು ತಮ್ಮ ಊರುಗಳಿಗೆ ತೆರಳಲಿದ್ದಾರೆ. ಮಂಗಳವಾರ ರಾತ್ರಿಯಿಂದ 1 ವಾರ ಲಾಕ್ ಡೌನ್ ಆರಂಭವಾಗಲಿರುವ ಹಿನ್ನಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಅಪಾರ ಸಂಖ್ಯೆಯ ಜನ ಊರುಗಳಿಗೆ ತೆರಳಲಿದ್ದಾರೆ.

ಕೆಲವರಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ಸಿಕ್ಕಿದೆ. ಹೆಚ್ಚಿನವರಿಗೆ ಕೆಲಸವಿಲ್ಲದಂತಾಗಿದೆ. ವ್ಯಾಪಾರ, ವಹಿವಾಟು, ಕೆಲಸವಿಲ್ಲದೇ, ಹೋಟೆಲ್, ಫ್ಯಾಕ್ಟರಿ ಸೇರಿ ಅನೇಕ ಉದ್ಯಮ ಬಂದ್ ಆಗಿವೆ. ಶಾಲೆಗಳಿಗೂ ರಜೆ ಇದೆ. ಲಾಕ್ ಡೌನ್ ವೇಳೆ ಕೆಲಸವಿಲ್ಲದೇ ಬೆಂಗಳೂರಲ್ಲಿ ಇರುವುದು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಸಾವಿರಾರು ಜನ ಊರಿಗೆ ಹೋಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...