alex Certify ತಾಯಿಯಿಂದಲೇ ಆಘಾತಕಾರಿ ಕೃತ್ಯ: ಮಲಮಗಳ ಉಸಿರು ನಿಲ್ಲಿಸಿದ ತಂದೆ – ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯಿಂದಲೇ ಆಘಾತಕಾರಿ ಕೃತ್ಯ: ಮಲಮಗಳ ಉಸಿರು ನಿಲ್ಲಿಸಿದ ತಂದೆ – ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ

ಮೈಸೂರು: ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾದನಹಳ್ಳಿಯಲ್ಲಿ ಹೆತ್ತ ಮಗಳನ್ನು ತಾಯಿಯೇ ಕೊಂದು ಹಾಕಿದ್ದಾಳೆ: ಈ ದುಷ್ಕೃತ್ಯಕ್ಕೆ ಆಕೆಯ ಎರಡನೇ ಗಂಡ ಮತ್ತು ತಾಯಿ ಸಾಥ್ ನೀಡಿದ್ದಾರೆ.

ಆರು ವರ್ಷದ ಹೆಣ್ಣು ಮಗುವನ್ನು ಕೊಂದ ಮಹಿಳೆ, ಆಕೆಯ ಎರಡನೇ ಗಂಡ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡಿನ ಸಿಂಗಾರಿಪುರದ ಮಹಿಳೆ ಮಂಡ್ಯ ಜಿಲ್ಲೆ ಅರಕೆರೆಯ ವ್ಯಕ್ತಿಯನ್ನು ಮದುವೆಯಾಗಿದ್ದು ಆತನಿಂದ ದೂರವಾಗಿದ್ದಾಳೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯ ಎಂಬುವನನ್ನು ಒಂದೂವರೆ ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದ ಮಹಿಳೆಗೆ ಮೊದಲ ಪತಿಯಿಂದ ಜನಿಸಿದ ಆರು ವರ್ಷದ ಬಾಲಕಿ ಇದ್ದಳು.

ಬಾಲಕಿಯನ್ನು ಶ್ಯಾದನಹಳ್ಳಿಯಲ್ಲಿರುವ ತನ್ನ ತಾಯಿ ಮನೆಯಲ್ಲಿ ಬಿಟ್ಟಿದ್ದ ಮಹಿಳೆ ಎರಡನೇ ಗಂಡನ ಮನೆಯವರಿಗೆ ತನ್ನ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಳೆ. ಎರಡನೇ ಮಗುವಿಗೆ ತಾಯಿಯಾದ ಮಹಿಳೆ ಬಾಣಂತನಕ್ಕಾಗಿ ತವರಿಗೆ ಆಗಮಿಸಿದ್ದಾಳೆ.

ಮಲಮಗಳ ಬಗ್ಗೆ ದ್ವೇಷ ಹೊಂದಿದ್ದ ಮಹಿಳೆಯ ಎರಡನೇ ಗಂಡ ಸೂರ್ಯ, ಅತ್ತೆ ಮತ್ತು ಪತ್ನಿಯೊಂದಿಗೆ ಸೇರಿ ಮಲಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ತನ್ನ ತಾಯಿ, ಅಜ್ಜಿ ಹಾಗೂ ಮಲ ತಂದೆಯಿಂದಲೇ ಆರು ವರ್ಷದ ಬಾಲಕಿ ಕೊಲೆಯಾಗಿ ಹೋಗಿದ್ದಾಳೆ.

ಅನಾರೋಗ್ಯದಿಂದ ಮಗಳು ಮೃತಪಟ್ಟಿರುವುದಾಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇದರಿಂದ ಅನುಮಾನಗೊಂಡ ಮಹಿಳೆಯ ಮೊದಲ ಪತಿ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...