alex Certify ಅಕ್ಕನ ಆಲಕ್ಷ್ಯ ಮಾಡಿ ಮತ್ತೊಂದು ಮದುವೆಯಾದ ಬಾವ, 2 ನೇ ಪತ್ನಿ ಮನೆಗೆ ಬಂದ ಬಾಮೈದನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕನ ಆಲಕ್ಷ್ಯ ಮಾಡಿ ಮತ್ತೊಂದು ಮದುವೆಯಾದ ಬಾವ, 2 ನೇ ಪತ್ನಿ ಮನೆಗೆ ಬಂದ ಬಾಮೈದನಿಂದಲೇ ಘೋರ ಕೃತ್ಯ

ಬೆಂಗಳೂರು: ತನ್ನ ಅಕ್ಕನನ್ನು ನಿರ್ಲಕ್ಷಿಸಿ ಇನ್ನೊಂದು ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಬಾವನ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಮೇಡಹಳ್ಳಿ ಸಮೀಪದ ಮಂಜುನಾಥ ನಗರದ ನಿವಾಸಿ ಶೈಲಶ್ರೀ(28), ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಆರೋಪಿ ಶ್ರೀಕಂಠನನ್ನು ಪೊಲೀಸರು ಬಂಧಿಸಿದ್ದಾರೆ. 4 ವರ್ಷದ ಹಿಂದೆ ಶ್ರೀಕಂಠನ ಸಹೋದರಿ ಚೈತ್ರಾ ಅವರನ್ನು ಮದುವೆಯಾಗಿದ್ದ ಮೇಡಹಳ್ಳಿ ಹರ್ಷ ನಂತರ ತನ್ನ ಗೆಳೆಯನ ಸೋದರಿ ಶೈಲಶ್ರೀ ಜೊತೆಗೆ ಮದುವೆಯಾಗಿದ್ದ.

ಇದರಿಂದಾಗಿ ಚೈತ್ರಾ ಮತ್ತು ಹರ್ಷ ನಡುವೆ ಭಿನ್ನಾಭಿಪ್ರಾಯ ಮೂಡಿ ದಾಂಪತ್ಯ ಕಲಹ ಉಂಟಾದ ಕಾರಣ ಹಿರಿಯರು ರಾಜಿ ಸಂಧಾನ ನಡೆಸಿದ್ದರು. ಇತ್ತೀಚೆಗೆ ಎರಡನೇ ಪತ್ನಿ ಮನೆಯಲ್ಲಿ ಹರ್ಷ ಹೆಚ್ಚಾಗಿರುತ್ತಿದ್ದ. ಇದರಿಂದ ಅಸಮಾಧಾನಗೊಂಡ ಚೈತ್ರಾಳ ಸಹೋದರ ಶ್ರೀಕಂಠ ತನ್ನ ಅಕ್ಕನಿಗೆ ಅನ್ಯಾಯವಾಗಿದೆ. ಬಾವ ಮತ್ತೊಂದು ಮದುವೆಯಾಗಿರುವುದೇ ಇದಕ್ಕೆ ಕಾರಣವೆಂದು ಶೈಲಶ್ರೀಯನ್ನು ಕೊಲೆ ಮಾಡಿದ್ದಾನೆ.

ಶೈಲಶ್ರೀ ಮನೆಗೆ ನುಗ್ಗಿದ ಆರೋಪಿ ಗಲಾಟೆ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಕುತ್ತಿಗೆಗೆ ವೈರ್ ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಕೆಆರ್ ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...