alex Certify ರಾತ್ರಿಯಿಡಿ ಸಿನಿಮೀಯ ಕಾರ್ಯಾಚರಣೆ, ಕಾರ್ ಚೇಸ್ ಮಾಡಿ ಕಿಡ್ನಾಪರ್ಸ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿಯಿಡಿ ಸಿನಿಮೀಯ ಕಾರ್ಯಾಚರಣೆ, ಕಾರ್ ಚೇಸ್ ಮಾಡಿ ಕಿಡ್ನಾಪರ್ಸ್ ಅರೆಸ್ಟ್

ಬೆಂಗಳೂರು: ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನನ್ನು ಅಪಹರಿಸಲಾಗಿದ್ದು ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಲಾಗಿದೆ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ ಮಾದನಾಯಕನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ನೇತೃತ್ವದ ತಂಡ ಬಾಲಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದೆ.

ಬೆಂಗಳೂರಿನ ಅಂದ್ರಹಳ್ಳಿಯ ಮನು, ದರ್ಶನ್, ಆದರ್ಶ, ಲೋಕೇಶ, ಆಕಾಶ ಬಂಧಿತ ಆರೋಪಿಗಳಾಗಿದ್ದಾರೆ. ನಿನ್ನೆ ಸಂಜೆ ನಾಯಿಮರಿ ಖರೀದಿಸುವ ನೆಪದಲ್ಲಿ ಅಂದ್ರಹಳ್ಳಿಯ ನಾಗರಾಜ್, ರೇಣುಕಾ ದಂಪತಿಯ ಪುತ್ರ ನಿತಿನ್ ನನ್ನು ಅಪಹರಿಸಲಾಗಿತ್ತು.

ಕಾರ್ ನಲ್ಲಿ ಬಂದು ಬೈಲಕೊನೇನಹಳ್ಳಿ ಸರ್ಕಲ್ ಬಳಿ ಅಪಹರಿಸಿದ ತಂಡ 20 ಲಕ್ಷ ರೂಪಾಯಿ ಹಣ ಕೊಡದಿದ್ದರೆ ಬಾಲಕನನ್ನು ಕೈಕಾಲು ಮುರಿದು ಕೊಲೆ ಮಾಡುವುದಾಗಿ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಮಾವನೂರ ಬಳಿ ಕಾರು ಚೇಸ್ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಬಾಲಕ ನಿತಿನ್ ನನ್ನು ರಕ್ಷಿಸಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...