alex Certify ಬಿಜೆಪಿ ನಾಯಕರಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ: ಪಿ.ಟಿ. ಪರಮೇಶ್ವರ್​ ನಾಯ್ಕ್​ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕರಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ: ಪಿ.ಟಿ. ಪರಮೇಶ್ವರ್​ ನಾಯ್ಕ್​ ಗುಡುಗು

ರಾಜ್ಯದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸೋತಿದೆ ಎಂಬ ಮಾತನ್ನ ವಿರೋಧ ಪಕ್ಷದ ನಾಯಕರು ಪದೇ ಪದೇ ಹೇಳ್ತಾನೇ ಬರ್ತಿದ್ದಾರೆ. ಇದೀಗ ಈ ವಿಚಾರವಾಗಿ ಹೂವಿನಹಡಗಲಿಯಲ್ಲಿ ಮಾತನಾಡಿದ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಇದೊಂದು ಅಸಮರ್ಥ ಸರ್ಕಾರ ಎಂದು ಜರಿದಿದ್ದಾರೆ.

ನೀವು ಜನರ ಜೀವ ತೆಗೆಯೋಕೆ ಬರೀ ಸುಳ್ಳನ್ನ ಹೇಳ್ತಾ ಇದ್ದೀರಾ. ಯಾವ ಪುರುಷಾರ್ಥಕ್ಕಾಗಿ ನೀವೆಲ್ಲ ಆಡಳಿತ ಮಾಡುತ್ತಿದ್ದೀರಾ..? ನಿಮ್ಮದು ಅಸಮರ್ಥ ಹಾಗೂ ಭಂಡರ ಸರ್ಕಾರ. ಚಾಮರಾಜನಗರದಲ್ಲಿ ನಡೆದ ದುರಂತಕ್ಕೆ ಯಾರು ಹೊಣೆ..? ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಹೇಳಿದ್ರು. ಆದರೆ 37 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ನಿಮಗೆಲ್ಲ ಆಡಳಿತ ಮಾಡುವ ಯೋಗ್ಯತೆ ಇಲ್ಲ. ಸಿಎಂ ಯಡಿಯೂರಪ್ಪ ಒಂದು ರೀತಿಯ ಹೇಳಿಕೆ ಕೊಟ್ಟರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತೊಂದು ರೀತಿಯಲ್ಲೇ ಹೇಳಿಕೆ ನೀಡ್ತಾರೆ ಎಂದು ಗುಡುಗಿದ್ರು.

ಐಸಿಎಂಆರ್​ ಏನು ಹೇಳ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಯಾವೆಲ್ಲ ರೀತಿಯ ಎಚ್ಚರಿಕೆ ಕೊಡ್ತಿದೆ ಇವೆಲ್ಲ ನಿಯಮಗಳನ್ನ ನೀವು ಪಾಲನೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡೋದ್ರಲ್ಲೇ ಮುಳುಗಿ ಹೋಗಿದೆ ಎಂದು ಆಕ್ರೋಶ ಹೊರಹಾಕಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...