alex Certify ಶಾಕಿಂಗ್ ನ್ಯೂಸ್: ತಾನೇ ಸಿದ್ಧಮಾಡಿದ ಚಿತೆಗೆ ಅಗ್ನಿ ಪ್ರವೇಶ, ಜೀವಬಿಟ್ಟ ರೈತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ತಾನೇ ಸಿದ್ಧಮಾಡಿದ ಚಿತೆಗೆ ಅಗ್ನಿ ಪ್ರವೇಶ, ಜೀವಬಿಟ್ಟ ರೈತ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಗ್ರಾಮದ ಕೊಂಕಣಕೊಪ್ಪದಲ್ಲಿ ರೈತರೊಬ್ಬರು ತಾವೇ ಸಿದ್ಧಪಡಿಸಿದ ಚಿತೆಗೆ ಅಗ್ನಿಪ್ರವೇಶ ಮಾಡಿ ಪ್ರಾಣ ಬಿಟ್ಟಿದ್ದಾರೆ.

60 ವರ್ಷದ ಕೃಷಿಕ ಶಿವರಾಮಕೃಷ್ಣ ಹೆಗಡೆ ಪ್ರಾಣ ಕಳೆದುಕೊಂಡ ರೈತ. ಕೆಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

ಎರಡು ವರ್ಷದ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ತೀರಿಕೊಂಡಿದ್ದು ಇದರಿಂದ ವೈರಾಗ್ಯ ಹೊಂದಿದ ಶಿವರಾಮಕೃಷ್ಣ ಮಂಗಳವಾರ ರಾತ್ರಿ ಜಮೀನಿನ ಬಳಿ ಕಾಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಟ್ಟಿಗೆ ರಾಶಿ ಹಾಕಿದ್ದು ಚಿತೆಗೆ ಹಚ್ಚಿದ ಬೆಂಕಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...