![](https://kannadadunia.com/wp-content/uploads/2020/05/Coronavirus_EPS.jpg)
ಬೆಂಗಳೂರು: ದುಬೈನಿಂದ ಆಗಮಿಸಿದ್ದ 30 ಜನ ಕ್ವಾರಂಟೈನ್ ಆಗದೇ ಎಸ್ಕೇಪ್ ಆಗಿದ್ದಾರೆ. ವಿಮಾನ ಲ್ಯಾಂಡಿಂಗ್ ಗೆ ರಾಜ್ಯದಲ್ಲಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ 180 ಜನರಿದ್ದ ವಿಮಾನ ಲ್ಯಾಂಡಿಂಗ್ ಆಗಿತ್ತು.
ಕೇರಳದಿಂದ ಸೇವಾಸಿಂಧು ಆಪ್ ಗೆ ನೋಂದಣಿ ಮಾಡಿದವರಿಗೆ ಕಾಸರಗೋಡಿನಲ್ಲಿ ಎಲ್ಲರ ಕ್ವಾರಂಟೈನ್ ಗೆ ಸೂಚನೆ ನೀಡಲಾಗಿತ್ತು. ಇವರಲ್ಲಿ 30 ಜನ ಕ್ವಾರಂಟೈನ್ ಗೆ ತೆರಳದೆ ಪರಾರಿಯಾಗಿದ್ದಾರೆ.
ಕೊಡಗು ಜಿಲ್ಲೆಗೆ 20 ಹಾಗೂ ಮಂಗಳೂರಿಗೆ 10 ಜನ ಪ್ರವೇಶಿಸಿದ್ದು, ಪರಾರಿಯಾಗಿರುವ ಈ 30 ಜನರಿಂದ ಕೊರೊನಾ ಆತಂಕ ಎದುರಾಗಿದೆ.