alex Certify ರೆಮಿಡಿಸಿವರ್​​ ಚುಚ್ಚುಮದ್ದುಗಳನ್ನ ಅನ್ಯರಾಜ್ಯಕ್ಕೆ ಕಳಿಸಿದ್ದ ಅಧಿಕಾರಿಗಳಿಗೆ ಸಿಎಂ ಕ್ಲಾಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಮಿಡಿಸಿವರ್​​ ಚುಚ್ಚುಮದ್ದುಗಳನ್ನ ಅನ್ಯರಾಜ್ಯಕ್ಕೆ ಕಳಿಸಿದ್ದ ಅಧಿಕಾರಿಗಳಿಗೆ ಸಿಎಂ ಕ್ಲಾಸ್..​..!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದ್ದು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಜನರು ಪ್ರಾಣ ಬಿಡ್ತಿದ್ದಾರೆ. ರಾಜ್ಯದ ವಿವಿಧೆಡೆಯಲ್ಲಿ ರೆಮಿಡಿಸಿವರ್​​ ಚುಚ್ಚು ಮದ್ದುಗಳನ್ನ ಬ್ಲಾಕ್​ ಮಾರ್ಕೆಟ್​​ನಲ್ಲಿ ಮಾರಾಟ ಮಾಡುತ್ತಿರುವ ವಿಚಾರವಾಗಿ ಮಹತ್ವದ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡ್ರು.

ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದೊಂದು ಅತ್ಯಂತ ಕ್ಲಿಷ್ಟಕರ ಸಂದರ್ಭವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮೊಟ್ಟಿಗೆ ನಿಂತಿದೆ. ಆದರೆ ಕೆಲ ಅಧಿಕಾರಿಗಳು ರೆಮಿಡಿಸಿವರ್​ ಚುಚ್ಚು ಮದ್ದುಗಳನ್ನ ಅನ್ಯರಾಜ್ಯಕ್ಕೆ ರಫ್ತು ಮಾಡ್ತಿದ್ದಾರೆ ಎಂಬ ಆರೋಪ ಸರ್ಕಾರದ ಕಿವಿಗೆ ಬಿದ್ದಿದೆ.

ಈ ವಿಚಾರವಾಗಿ ನಾನೇ ತನಿಖೆ ನಡೆಸುತ್ತೇನೆ. ತಪ್ಪಿತಸ್ಥರನ್ನ ಪಾರು ಮಾಡುವ ಮಾತೇ ಇಲ್ಲ. ಯಾವುದೇ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದರೂ ಸಹ ಪರಿಣಾಮ ಭೀಕರವಾಗಿರಲಿದೆ. ಇದನ್ನೇ ಎಚ್ಚರಿಕೆ ಎಂದು ಭಾವಿಸಿದೆ. ಇನ್ಮುಂದೆ ಜನಸೇವೆಗೆ ಬದ್ಧರಾಗಿ. ಇಲ್ಲವಾದಲ್ಲಿ ತನಿಖೆ ಮಾಡಿಸಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ. ಎಚ್ಚರಿಕೆ ಕೆಲಸ ಮಾಡಿ ಎಂದು ಸಿಎಂ ಯಡಿಯೂರಪ್ಪ ಖಡಕ್​ ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...