alex Certify BIG NEWS: ಅಸಮಾಧಾನಿತ ಸಚಿವರ ಮನವೊಲಿಕೆಗೆ ಆರ್.‌ ಅಶೋಕ್ ಕಸರತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಸಮಾಧಾನಿತ ಸಚಿವರ ಮನವೊಲಿಕೆಗೆ ಆರ್.‌ ಅಶೋಕ್ ಕಸರತ್ತು

ಬೆಂಗಳೂರು: ಖಾತೆ ಹಂಚಿಕೆ, ಅದಲು-ಬದಲು ಬೆನ್ನಲ್ಲೇ ಸಚಿವರ ಅಸಮಾಧಾನ ಭುಗಿಲೆದ್ದಿದೆ. ಸಚಿವರಾದ ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಮಾಧಾನಿತ ಸಚಿವರ ಮನವೊಲಿಕೆ ಜವಾಬ್ದಾರಿಯನ್ನು ಸಚಿವರಾದ ಆರ್. ಅಶೋಕ್ ಹಾಗೂ ಬಸವರಾಜ್ ಬೊಮ್ಮಾಯಿಗೆ ವಹಿಸಲಾಗಿದ್ದು, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ ಅವರನ್ನು ತಮ್ಮ ನಿವಾಸಕ್ಕೆ ಕರೆದು ಆರ್. ಅಶೋಕ್ ಚರ್ಚೆ ನಡೆಸಿದ್ದಾರೆ. ವಸತಿ ಖಾತೆ ಕೈತಪ್ಪಿರುವುದಕ್ಕೆ ಅಸಮಾಧಾನ ಹೊರಹಾಕಿದ್ದ ನಾಗರಾಜ್ ಹಾಗೂ ಆಹಾರ ಖಾತೆ ಕೈತಪ್ಪಿದ್ದಕ್ಕೆ ಬೇಸರಗೊಂಡಿದ್ದ ಗೋಪಾಲಯ್ಯ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ.

ಸಚಿವ ಎಂಟಿಬಿ ನಾಗರಾಜ್, ತಮಗೆ ನೀಡಿರುವ ಅಬಕಾರಿ ಖಾತೆ ಬೇಡ. ಬೇರೆ ಖಾತೆ ನೀಡುವಂತೆ ಒತ್ತಾಯಿಸಿದ್ದಾರೆ. ಅಬಕಾರಿ ಖಾತೆಯಲ್ಲಿ ತಾನು ಮಾಡುವಂಥದ್ದು ಏನೂ ಇಲ್ಲ. ಹಾಗಾಗಿ ಸಾರ್ವಜನಿಕವಾಗಿ ಕೆಲಸ ಮಾಡುವ ವಸತಿ ಖಾತೆ ನೀಡುವಂತೆ ಕೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...