alex Certify ಬೆಂಗಳೂರಿಗರಿಗೆ ರಸದೌತಣ ನೀಡಲಿದೆ ಜಾನಪದ ಕಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರಿಗೆ ರಸದೌತಣ ನೀಡಲಿದೆ ಜಾನಪದ ಕಲೆ

ಕರ್ನಾಟಕ ಚಿತ್ರಕಲಾ ಪರಿಷತ್ತು ಕಲಾ ರಸಿಕರನ್ನು ರಂಜಿಸಲು ಸರಣಿ ಕಾರ್ಯಕ್ರಮಗಳನ್ನ ಆಯೋಜಿಸಿದೆ. ಜನವರಿ ತಿಂಗಳ ವಾರದ ಕೊನೆಯ ದಿನಗಳಂದು ಹುಲಿವೇಷ ನೃತ್ಯ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ ಪ್ರದರ್ಶಿಸಲಿದೆ.

ಜನವರಿ 3 ರ ಭಾನುವಾರ ಕರಾವಳಿ ಭಾಗದ ಪ್ರಸಿದ್ಧ ಕಲಾ ಪ್ರಾಕಾರವಾದ ಹುಲಿ ವೇಷ ನೃತ್ಯ ಪ್ರದರ್ಶನ ನಡೆಯಲಿದೆ.

ಜನವರಿ 10 ರ ಭಾನುವಾರದಂದು ಡೊಳ್ಳು ಕುಣಿತ ಮತ್ತು ಜನವರಿ 17 ರ ಭಾನುವಾರದಂದು ತೊಗಲು ಗೊಂಬೆಯಾಟ ನಡೆಯಲಿದೆ.

ಪರಿಷತ್ತಿನ ಆವರಣದಲ್ಲಿ ಚಿತ್ರಕಲಾ ಕಾಲೇಜು ಇದ್ದು, 15 ಗ್ಯಾಲರಿಗಳಿವೆ. ಈ ಪೈಕಿ 13 ಗ್ಯಾಲರಿಗಳಲ್ಲಿ ಸದಾಕಾಲ ವರ್ಣಚಿತ್ರಗಳು, ಶಿಲ್ಪಕಲೆ, ಜನಪದ ಕಲಾ ಪ್ರದರ್ಶನಗಳು ಇದ್ದೇ ಇರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...