alex Certify ’ಬಜಾರ್’ ನಾಯಕನ ವಿರುದ್ಧ ಎಫ್ಐಆರ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಬಜಾರ್’ ನಾಯಕನ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಬಜಾರ್ ಚಿತ್ರದ ನಾಯಕ ನಟ ಧನ್ವೀರ್ ಗೌಡ ವಿರುದ್ಧ ಅರಣ್ಯ ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅತ್ತಿಗೋಡು ಆನೆ ಶಿಬಿರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ನಟ ಧನ್ವೀರ್ ಹಾಗೂ ಆತನ ಸ್ನೇಹಿತರು ಅಲ್ಲಿನ ಆನೆ ಮೇಲೆ ಕುಳಿತು ದರ್ಪ ಮೆರೆದಿದ್ದರು ಎನ್ನಲಾಗಿದೆ. ಅಲ್ಲದೇ ಆನೆ ಮೇಲೆ ಕುಳಿತು ಪೋಸ್ ನೀಡಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಧನ್ವೀರ್ ಅಪ್ ಲೋಡ್ ಮಾಡಿದ್ದರು. ನಟನ ಆನೆ ಸವಾರಿ ಇದೀಗ ವಿವಾದಕ್ಕೆ ಕಾರಣವಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ನಾಗರಹೊಳೆ ಅರಣ್ಯಾಧಿಕಾರಿಗಳು ಇದೀಗ ನಟ ಧನ್ವೀರ್ ಹಾಗೂ ವಿಶ್ವಾಸ್ ಅಯ್ಯಂಗಾರ್, ದರ್ಶನ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ನಟ ಧನ್ವೀರ್ ಹಾಗೂ ಸ್ನೇಹಿತರಿಗೆ ಸಹಕರಿಸಿದ ಆನೆ ಮಾವುತ ಹಾಗೂ ಆನೆ ಶಿಬಿರದ ಉಸ್ತುವಾರಿ ಸಿಬ್ಬಂದಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...