alex Certify ಸಂಕಷ್ಟದ ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ ಅನುಶ್ರೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದ ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ ಅನುಶ್ರೀ

ಬೆಂಗಳೂರು: ಡ್ರಗ್ಸ್ ಸೇವನೆ ಬಗೆಗಿನ ಆರೋಪದಿಂದ ನನಗೆ ಶಾಕ್ ಆಗಿದೆ. ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗುವವಳಲ್ಲ. ನಾನು ತುಂಬಾ ಬಡತನದಿಂದ ಬಂದವಳು. ನನಗೆ ಮೊದಲಿನಿಂದಲೂ ಪಾರ್ಟಿ ಬಗ್ಗೆ ಆಸಕ್ತಿಯಲ್ಲ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಡ್ರಗ್ಸ್ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿರುವ ಅನುಶ್ರೀ, ಸಿಸಿಬಿ ನೊಟೀಸ್ ಬಂದಾಗ ಭಯವಾಯಿತು. 14 ವರ್ಷಗಳ ಹಿಂದೆ ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿ ಒಬ್ಬಳೇ ಬಂದೆ. ಕಷ್ಟಪಟ್ಟು ಇಲ್ಲಿಯವರೆಗೂ ಬಂದಿದ್ದೇನೆ. 12 ವರ್ಷಗಳ ಕಾಲ ಹಾಸ್ಟೆಲ್ ನಲ್ಲೇ ಇದ್ದೆ. ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗದ ನನಗೆ ಏಕಾಏಕಿ ಸಿಸಿಬಿ ನೊಟೀಸ್, ಪೊಲೀಸ್ ಎಂದಾಗ ಭಯವಾಯಿತು. ಯಾವುದೇ ಹುಡುಗಿಗಾದರೂ ಪೊಲೀಸ್ ಎಂದ ತಕ್ಷಣ ಭಯವಾಗುವುದು ಸಹಜ. ಧರ್ಯದಿಂದ ವಿಚಾರಣೆ ಎದುರಿಸಿ ಬಂದಿದ್ದೇನೆ. ಆದಾಗ್ಯೂ ನನ್ನ ಸುತ್ತ ಇಲ್ಲ ಸಲ್ಲದ ಆರೋಪ, ಮಾತುಗಳು ಕೇಳಿಬರುತ್ತಿರುವುದು ನೋವುಂಟು ಮಾಡುತ್ತಿದೆ ಎಂದಿದ್ದಾರೆ.

ನಾನು ಯಾವತ್ತೂ ಡ್ರಗ್ಸ್ ಸೇವನೆ ಮಾಡಿಲ್ಲ. ನಾನು ಶೂಟಿಂಗ್ ಗೆ ಮಾತ್ರ ಹೋಗುತ್ತೇನೆ ಹೊರತು ಪಾರ್ಟಿಗಳಲ್ಲಿ ಭಾಗಿಯಾಗಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ಹೇಗೆ ಬಂತೆಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...