alex Certify ಸಿಎಂ ನಿವಾಸದಲ್ಲಿ ಸಚಿವ ಸುಧಾಕರ್ – ಶ್ರೀರಾಮುಲು ಸಂಧಾನ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ನಿವಾಸದಲ್ಲಿ ಸಚಿವ ಸುಧಾಕರ್ – ಶ್ರೀರಾಮುಲು ಸಂಧಾನ…?

ಬೆಂಗಳೂರು: ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಸಿಎಂ ಯಡಿಯೂರಪ್ಪ ಭೇಟಿಗೆ ಬರುತ್ತಿದ್ದಂತೆಯೇ ಸಚಿವ ಡಾ.ಕೆ ಸುಧಾಕರ್ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆರಂಭದಿಂದಲೂ ಸಚಿವ ಶ್ರೀರಾಮುಲು ಹಾಗೂ ಸುಧಾಕರ್ ನಡುವೆ ಅಸಮಾಧಾನವಿದ್ದು, ಇದೀಗ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಸುಧಾಕರ್ ಗೆ ಹೆಚ್ಚುವರಿಯಾಗಿ ನೀಡಿರುವುದರಿಂದ ಅಸಮಾಧಾನ ಇನ್ನಷ್ಟು ಭುಗಿಲೆದ್ದಿದೆ. ಈ ನಿಟ್ಟಿನಲ್ಲಿ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ, ಇಬ್ಬರು ಸಚಿವರನ್ನು ಕೂರಿಸಿ ಅಸಮಾಧಾನ ಶಮನ ಮಾಡಲಿದ್ದಾರೆ ಎನ್ನಲಾಗಿದೆ.

ಸಿಎಂ ಯಡಿಯೂರಪ್ಪ ಎದುರಲ್ಲೇ ಉಭಯ ಸಚಿವರ ಸಂಧಾನ ಮಾತುಕತೆ ನಡೆಯಲಿದ್ದು, ಸಚಿವ ಶ್ರೀರಾಮುಲು ಸಮಾಜ ಕಲ್ಯಾಣ ಖಾತೆಯೊಂದನ್ನೇ ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...