alex Certify ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್ ವಾಪಸ್; ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್ ವಾಪಸ್; ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು…?

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆಮಾಡಿ ದೂರು ನೀಡಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ಉಲ್ಟಾ ಹೊಡೆದಿದ್ದು, ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ. ಕೇಸ್ ವಾಪಸ್ ಪಡೆಯಲು ಕಾರಣವೇನು ಎಂಬ ಬಗ್ಗೆ ಸ್ವತಃ ಕಲ್ಲಹಳ್ಳಿ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ನನ್ನ ಹೋರಾಟ ನ್ಯಾಯಕ್ಕಾಗಿ ಆಗಿತ್ತು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಈ ಪ್ರಕರಣದಲ್ಲಿ ನಾನು 5 ಕೋಟಿ ಡೀಲ್ ನಲ್ಲಿ ಭಾಗಿಯಾಗಿರುವುದಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ ಜನರು, ನನ್ನ ಕುಟುಂಬದವರು ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಇದರಿಂದ ಬೇಸರಗೊಂಡು ನಾನು ಕೇಸ್ ವಾಪಸ್ ಪಡೆಯುತ್ತಿದ್ದೇನೆ ಎಂದರು.

 ಸಾಹುಕಾರ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಯು ಟರ್ನ್ ಹೊಡೆದ ಕಲ್ಲಹಳ್ಳಿ

ಅಷ್ಟೇ ಅಲ್ಲ ಜನರ ಬಾಯಲ್ಲಿ ಸಂತ್ರಸ್ತ ಯುವತಿ ಇಂದು ಅಪರಾಧಿಯಾಗಿದ್ದಾರೆ. ದೂರು ಕೊಟ್ಟವರನ್ನೇ ತಪ್ಪಿತಸ್ಥರೆಂದು ನೋಡುತ್ತಿದ್ದಾರೆ. ಹೆಚ್.ಡಿ.ಕೆ ಆರೋಪ ಆಧಾರ ರಹಿತವಾದ ಆರೋಪ. ಈ ಎಲ್ಲಾ ಕಾರಣದಿಂದ ಬೇಸರವಾಗಿ ನಾನು ಕೇಸ್ ವಾಪಸ್ ಪಡೆಯುತಿದ್ದೇನೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Najít kočku: vrcholový test pozornosti на Kde se skrývá autíčko: jen ti nejpozornější ho najdou Vynikající jemné Jak najít měsíc v koláčcích za 7 sekund: výzva