alex Certify ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಸರ್ಕಾರ: ವಠಾರಾ ಶಾಲೆ ರೂವಾರಿ ದಿಢೀರ್ ಎತ್ತಂಗಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಸರ್ಕಾರ: ವಠಾರಾ ಶಾಲೆ ರೂವಾರಿ ದಿಢೀರ್ ಎತ್ತಂಗಡಿ

ಕಲಬುರಗಿ; ವಿದ್ಯಾಗಮ ಯೋಜನೆಯಡಿ ಶಾಲೆಗೆ ಹೋದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ವಠಾರಾ ಶಾಲೆಯ ರೂವಾರಿ, ವಿದ್ಯಾಗಮ ಯೋಜನೆ ಪರಿಚಯಿಸಿದ್ದ ಐಎಎಸ್ ಅಧಿಕಾರಿಯನ್ನು ದಿಢೀರ್ ಎತ್ತಂಗಡಿ ಮಾಡಿದೆ.

ವಿದ್ಯಾಗಮ ಯೋಜನೆ ಹಾಗೂ ವಠಾರಾ ಶಾಲೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಲಬುರಗಿ ವಲಯ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳೀನ್ ಅತುಲ್ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ನಳೀನ್ ಅತುಲ್ ಕಲಬುರಗಿಯಲ್ಲಿ ವಿದ್ಯಾಗಮ ಯೋಜನೆಯಡಿ ವಠಾರಾ ಶಾಲೆಗಳ ಮೂಲಕ ಕಲಿಕೆಗೆ ಆದೇಶ ನೀಡಿದ್ದರು. ವಠಾರಾ ಶಾಲೆಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...