alex Certify ‘ಪರೀಕ್ಷೆ’ಯ ಮಾಹಿತಿಯೇ ಇರಲಿಲ್ಲ ಈ ವಿದ್ಯಾರ್ಥಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪರೀಕ್ಷೆ’ಯ ಮಾಹಿತಿಯೇ ಇರಲಿಲ್ಲ ಈ ವಿದ್ಯಾರ್ಥಿಗೆ…!

ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜೂನ್ 18 ರ ಗುರುವಾರದಂದು ನಡೆಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇದರ ಮಧ್ಯೆ ಮಲೆನಾಡಿನ ಕುಗ್ರಾಮವೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಇಂಗ್ಲಿಷ್ ಪರೀಕ್ಷೆಯ ಮಾಹಿತಿಯೇ ಇರಲಿಲ್ಲವೆನ್ನಲಾಗಿದೆ. ಈ ವಿದ್ಯಾರ್ಥಿಯ ಮನೆಯಲ್ಲಿ ಮೊಬೈಲ್, ಟಿವಿ ಇಲ್ಲದ ಕಾರಣ ಪರೀಕ್ಷೆ ನಿಗದಿಯಾಗಿರುವುದು ಹಾಗೂ ಸ್ಥಳದ ಮಾಹಿತಿ ಇರಲಿಲ್ಲ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಗ್ರಾಮ ಇಕ್ಕೇರಿ ಬೇಳೂರಿನ ವಿದ್ಯಾರ್ಥಿ ಅಶ್ವಿತ್ ಈ ವಿದ್ಯಾರ್ಥಿಯಾಗಿದ್ದು ಈತನ ಮಾಹಿತಿ ಪಡೆದ ಸ್ಥಳೀಯರು, ಶಾಸಕ ಆರಗ ಜ್ಞಾನೇಂದ್ರ ಅವರ ನೆರವಿನಿಂದ ತುರ್ತು ವಾಹನ ಸೌಲಭ್ಯ ಕಲ್ಪಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲೇ ಓದಿಕೊಂಡಿದ್ದ ಕಾರಣ ವಿದ್ಯಾರ್ಥಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...