alex Certify ನೋವಿನ ಮೇಲೆ ನೋವು……ಆಘಾತಕ್ಕೀಡಾದ ಯುವಕನಿಂದ ಇದೆಂಥ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋವಿನ ಮೇಲೆ ನೋವು……ಆಘಾತಕ್ಕೀಡಾದ ಯುವಕನಿಂದ ಇದೆಂಥ ನಿರ್ಧಾರ

ಮೈಸೂರು: ಹಲವು ವರ್ಷಗಳಿಂದ ಪ್ರೀತಿಸಿದ ಹುಡುಗಿ ಜೊತೆಗಿನ ಮದುವೆ ಮುರಿದುಬಿದ್ದ ನೋವು….ಅದರಿಂದ ಹೊರ ಬರಲಾಗದೇ ಪರಿತಪಿಸುತ್ತಿದ್ದ ಯುವಕ ಸಹೋದರಿಯ ಮದುವೆಯನ್ನಾದರೂ ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ. ಆದರೆ ಆತನಿಗಾದ ಇನ್ನೊಂದು ಆಘಾತದಿಂದ ಮನನೊಂದ ಯುವಕ ಬದುಕನ್ನೇ ಅಂತ್ಯಗೊಳಿಸಿದ್ದಾನೆ.

ಆಗಲೇ ತನ್ನ ಪ್ರೀತಿಯ ವಿಚಾರದಲ್ಲಿ ಸೋಲನುಭವಿಸಿ ನೋವನುಭವಿಸಿದ್ದ ಚೇತನ್ ಶರ್ಮಾ (29), ತಂಗಿಯ ಮದುವೆಯೂ ಮುರಿದು ಬಿದ್ದ ಬೆನ್ನಲ್ಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ವಿಜಯಶ್ರೀಪುರದಲ್ಲಿ ನಡೆದಿದೆ.

ಮೂಲತಃ ಬೆಂಗಳೂರಿನವನಾದ ಚೇತನ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ. ಹತ್ತು ವರ್ಷಗಳಿಂದ ಯುವತಿ ಒಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಕಾರಣಾಂತರಗಳಿಂದ ಮದುವೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ.

ಇತ್ತೀಚೆಗೆ ಚೇತನ್ ತಂಗಿಯ ವಿವಾಹ ನಿಶ್ಚಯವಾಗಿತ್ತು. ಆದರೆ ಅದು ಕೂಡ ಮುರಿದುಬಿದ್ದಿತ್ತು. ಒಂದರ ಮೇಲೊಂದರಂತೆ ನೋವುಂಡ ಚೇತನ್ ಖಿನ್ನತೆಗೆ ಒಳಗಾಗಿದ್ದ. ಜೀವನದಲ್ಲಿನ ಘಟನೆಗಳಿಗೆ ಬೇಸತ್ತು ಇದೀಗ ಬಾಡಿಗೆ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಯಲಕ್ಷ್ಮಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...