alex Certify ನಾನೂ ಸಿಎಂ ಹುದ್ದೆ ಆಕಾಂಕ್ಷಿ ಎಂದ ಪರಿಷತ್ ಸದಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನೂ ಸಿಎಂ ಹುದ್ದೆ ಆಕಾಂಕ್ಷಿ ಎಂದ ಪರಿಷತ್ ಸದಸ್ಯ

ಗದಗ: ಎಲ್ಲರೂ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುವವರೇ. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಗೊಂದಲಗಳ ಗೂಡು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕನಸುಗಳು. ತಿರುಕನು ಕೂಡ ಕನಸಲ್ಲಿ ರಾಜನಾಗಿ ಮೆರೆಯುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಸಿಎಂ ಹುದ್ದೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೊರಟ್ಟಿ, ನಾನು ಸೇರಿದಂತೆ ಎಲ್ಲರೂ ಸಿಎಂ ಹುದ್ದೆ ಆಕಾಂಕ್ಷಿಗಳೇ. ಸಿಎಂ ಹುದ್ದೆ ಬಗ್ಗೆ ಎಲ್ಲರೂ ಕನಸು ಕಾಣುವವರೇ. ಮುಖ್ಯಮಂತ್ರಿಯಾದಂತೆ ಕನಸು ಕಾಣುವುದು ತಪ್ಪಲ್ಲ, ತಿರುಕ ಕೂಡ ಕನಸಿನಲ್ಲಿ ತಾನು ರಾಜನಾಗಿದ್ದೇನೆ ಎಂದು ತಿಳಿಯುತ್ತಾನೆ. ಹಾಗೇ ಸಿಎಂ ಖುರ್ಚಿ ಕನಸು ಕಾಣುವವರು ಕಾಣಲಿ ಬಿಡಿ ಎಂದು ಹೇಳಿದರು.

ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಗೊಂದಲಗಳಿವೆ. ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸುತ್ತಾ ಹೋದರೆ ರಾಜಕಾರಣ ಮಾಡುವುದೇ ಬೇಡ ಎನಿಸಿಬಿಡುತ್ತದೆ. ಹಾಗಂತ ರಾಜಕಾರಣ ಬಿಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...