alex Certify ಗಾಡ್ ಫಾದರ್ ಇಲ್ಲದೇ ಬೆಳೆದಿದ್ದೇವೆ; ಕುತಂತ್ರಿಗಳ ಷಡ್ಯಂತ್ರ ಸಹಿಸಲಾಗದು ಎಂದ ಬಿ.ಸಿ. ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಡ್ ಫಾದರ್ ಇಲ್ಲದೇ ಬೆಳೆದಿದ್ದೇವೆ; ಕುತಂತ್ರಿಗಳ ಷಡ್ಯಂತ್ರ ಸಹಿಸಲಾಗದು ಎಂದ ಬಿ.ಸಿ. ಪಾಟೀಲ್

ಬೆಂಗಳೂರು: ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿ ಸಚಿವರುಗಳು ಕೋರ್ಟ್ ಮೊರೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ಯಾವುದೇ ಗಾಡ್ ಪಾದರ್ ಇಲ್ಲದೇ ರಾಜಕೀಯ ರಂಗದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವ ನಮ್ಮ ತೇಜೋವಧೆಗೆ ಟಾರ್ಗೆಟ್ ಮಾಡಿದ್ದಾರೆ. ಇದನ್ನು ತಡೆಯಲು ಕೋರ್ಟ್ ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಿಗೆ ಬೆಳೆದುಬಂದಿದ್ದು, ಬಹಳ ಜನರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಕುತಂತ್ರಿಗಳು ಷಡ್ಯಂತ್ರ ಮಾಡಿ ನಮ್ಮ ತೇಜೋವಧೆಗೆ ಯತ್ನಿಸಿದ್ದಾರೆ. ವಿನಾಕಾರಣ ಸತ್ಯಾಸತ್ಯತೆ ಅರಿಯದೇ ನಮ್ಮ ತೇಜೋವಧೆ ಆಗಬಾರದು. ಹಾಗಾಗಿ ಕಾನೂನು ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಕೋರ್ಟ್ ಮೊರೆ ಹೋದ ಬಾಂಬೆ ಫ್ರೆಂಡ್ಸ್ – ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆಕ್ಷೇಪ

ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಬಾರದು ಎಂದು ಮುಂಜಾಗೃತಾ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ತಡೆಯಾಜ್ಞೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Nezabudnuteľná zmrzlinová výzva: len niektorí nájdu 3 prázdne Vyhľadávanie ihly v kopy sena: Nájdi myš za 8 sekúnd: hádanka pre