alex Certify ಕೊಲೆಗೆ ಕಾರಣವಾಯ್ತು ಚಿಕನ್ ಸಾಂಬಾರ್..‌..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆಗೆ ಕಾರಣವಾಯ್ತು ಚಿಕನ್ ಸಾಂಬಾರ್..‌..!

ಚಿಕ್ಕ ಚಿಕ್ಕ ವಿಚಾರಗಳಿಗೆ ಪ್ರಾರಂಭವಾದ ಜಗಳಗಳು ಕೊಲೆಯಾಗುವ ಮಟ್ಟಕ್ಕೆ ಬರೋದನ್ನು ಕೇಳಿದ್ದೇವೆ. ನೋಡಿದ್ದೇವೆ.

ಇದೀಗ ಇಂತಹದ್ದೇ ಚಿಕ್ಕ ವಿಚಾರಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ಶ್ರೀಮಂಗಲ ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ಅದು ಚಿಕನ್ ಸಾಂಬಾರ್ ವಿಚಾರವಾಗಿ ಅನ್ನೋದು ವಿಪರ್ಯಾಸ.

ನಂಜನಗೂಡು ತಾಲೂಕಿನ ಕೊತ್ತನಹಳ್ಳಿಯ ಕುಮಾರ್‌ ದಾಸ ಎಂಬಾತ ಕೊಲೆಯಾದ ಕಾರ್ಮಿಕ. ಮೊನ್ನೆ ರಾತ್ರಿ ನಾಲ್ಕೇರಿ ಗ್ರಾಮದ ತೋಟವೊಂದರಲ್ಲಿ ಚಿಕನ್ ಊಟ ರೆಡಿ ಮಾಡಲಾಗಿತ್ತು. ಈ ವೇಳೆ ಚಿಕನ್ ಸಾಂಬಾರ್ ಬಡಿಸುವ ವೇಳೆ ಇಬ್ಬರು ಕಾರ್ಮಿಕರ ನಡುವೆ ಜಗಳ ನಡೆದಿದೆ. 25 ವರ್ಷದ ಕಾರ್ಮಿಕ ಕುಮಾರ್ ದಾಸ ತಲೆಗೆ ಸೌದೆಯಿಂದ ಹೊಡೆದಿದ್ದಾರೆ. ತೀವ್ರ ಗಾಯಗೊಂಡ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ಇನ್ನು ಈ ಘಟನೆ ಸಂಬಂಧ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಟ್ಟೆಪಾಡಿಗಾಗಿ ದುಡಿಯಲು ಎಲ್ಲೋ ಹೋಗಿ ತುತ್ತು ಅನ್ನಕ್ಕೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರಂತದ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...