alex Certify ಒಂಟಿ ಮಹಿಳೆ ಕೊಲೆ ಆರೋಪಿಗಳ ಬಂಧನಕ್ಕೆ ನೆರವಾಯ್ತು ಮೊಬೈಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟಿ ಮಹಿಳೆ ಕೊಲೆ ಆರೋಪಿಗಳ ಬಂಧನಕ್ಕೆ ನೆರವಾಯ್ತು ಮೊಬೈಲ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರವಂತೆ ಗ್ರಾಮದಲ್ಲಿ ಬುಧವಾರದಂದು ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಈ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. 44 ವರ್ಷದ ಹಮೀದಾ ಬೇಗಂ ಹತ್ಯೆಯಾದವರಾಗಿದ್ದು, ಈಕೆ ಒಬ್ಬಂಟಿಯಾಗಿ ವಾಸವಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹಮೀದಾ ಬೇಗಂಗೆ ಪರಿಚಿತರಾಗಿದ್ದ ಅರುಣ್, ಅಭಿಜಿತ್ ಹಾಗೂ ಇರ್ಫಾನ್ ಎಂಬ ಮೂವರನ್ನು ಬಂಧಿಸಿದ್ದಾರೆ. ಮಾದಕ ವಸ್ತು ಹಾಗೂ ಮದ್ಯ ವ್ಯಸನಿಗಳಾಗಿದ್ದ ಆರೋಪಿಗಳು, ಹಮೀದಾ ಬೇಗಂ ಬಳಿ ಅಪಾರ ಹಣ ಹಾಗೂ ಒಡವೆ ಇರಬಹುದೆಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ.

ಆರೋಪಿಗಳ ಪೈಕಿ ಒಬ್ಬನ ಮೊಬೈಲ್ ಬಿದ್ದು ಹೋಗಿದ್ದು, ಇದು ಸ್ಥಳೀಯ ಮಹಿಳೆಯೊಬ್ಬರಿಗೆ ಸಿಕ್ಕಿತ್ತು. ಇದರ ಸುಳಿವಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇವರುಗಳು ಅಡವಿಟ್ಟಿದ್ದ ಒಡವೆಯನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...