alex Certify ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನ; ಪತ್ನಿ ಮಾಡಿದ ಗಂಭೀರ ಆರೋಪವೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನ; ಪತ್ನಿ ಮಾಡಿದ ಗಂಭೀರ ಆರೋಪವೇನು…?

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪತಿ ಆತ್ಮಹತ್ಯೆ ಯತ್ನದ ಬೆನ್ನಲ್ಲೇ ಸಂತೋಷ್ ಪತ್ನಿ ಜಾಹ್ನವಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್. ಸಂತೋಷ್ ಪತ್ನಿ ಜಾಹ್ನವಿ, ಘಟನೆ ಬಳಿಕ ಹಲವಾರು ಅನಗತ್ಯ ಸುದ್ದಿಗಳು ಹರಡುತ್ತಿವೆ. ಕೌಟುಂಬಿಕ ಕಲಹವಿತ್ತು ಎಂಬ ಸುದ್ದಿಯೂ ಹಡುತ್ತಿದೆ. ಆದರೆ ಅದೆಲ್ಲವೂ ಸುಳ್ಳು. ನಾನು ಹಾಗೂ ಎನ್.ಆರ್. ಸಂತೋಷ್ ಇಬ್ಬರೂ ತುಂಬಾ ಚೆನ್ನಾಗಿಯೇ ಇದ್ದೆವು. ನಮ್ಮಿಬ್ಬರಲ್ಲಿ ಯಾವುದೇ ಮನಸ್ತಾಪವಿಲ್ಲ. ಆದರೆ ಅವರಿಗೆ ತೀವ್ರವಾದ ರಾಜಕೀಯ ಒತ್ತಡವಿತ್ತು. ರಾಜಕೀಯ ಒತ್ತಡದಿಂದಾಗಿಯೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಎನ್.ಆರ್. ಸಂತೋಷ್ ನಿನ್ನೆ ಮನೆಗೆ ಬಂದಾಗ ಒತ್ತಡದಲ್ಲಿದ್ದರು. ಬದುಕು ಸಾಕೆನಿಸುತ್ತಿದೆ ಎಂದು ನನ್ನ ಬಳಿ ಬೇಸರ ವ್ಯಕ್ತಪಡಿಸಿದ್ದರು. ನಿದ್ದೆ ಬರದಿದ್ದರೆ ಅವರು ನಿದ್ದೆ ಮಾತ್ರೆ ಸೇವಿಸುತಿದ್ದರು. ನಿನ್ನೆ ಕೂಡ ಹಾಗೇ ನಿದ್ದೆ ಮಾತ್ರೆ ಸೇವಿಸಿದ್ದಾರೆ ಎಂದುಕೊಂಡಿದ್ದೆ. ಆದರೆ ನಿನ್ನೆ ಹಲವು ನಿದ್ದೆ ಮಾತ್ರೆ ತೆಗೆದುಕೊಂಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಿಸಿದೆವು ಎಂದು ಜಾಹ್ನವಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: