alex Certify ಆ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಬಲಿಯಾಗಿದ್ದಾಳೆ – ಪ್ರಧಾನಿಗೆ ಸಂದೇಶ ರವಾನಿಸಿ ರಕ್ಷಣೆ ಪಡೆಯಲಿ; ಹೆಚ್.ಡಿ.ಕೆ. ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಬಲಿಯಾಗಿದ್ದಾಳೆ – ಪ್ರಧಾನಿಗೆ ಸಂದೇಶ ರವಾನಿಸಿ ರಕ್ಷಣೆ ಪಡೆಯಲಿ; ಹೆಚ್.ಡಿ.ಕೆ. ಸಲಹೆ

ಬಸವಕಲ್ಯಾಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಚಿತಾವಣೆಗೆ ಒಳಗಾಗಿದ್ದಾಳೆ. ಆಕೆಗೆ ನ್ಯಾಯ ಬೇಕು ಎಂದಾದರೆ ನೇರವಾಗಿ ಸಿಜೆ ಮುಂದೆ ಮನವಿ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಆ ಹೆಣ್ಣುಮಗಳು ಯಾರದೋ ಒತ್ತಡಕ್ಕೆ ಮಣಿದು ಹೀಗೆ ಮಾಡುತ್ತಿದ್ದಾಳೆ. ರಹಸ್ಯ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ ಆಕೆ ಯಾರದೋ ಕುತಂತ್ರಕ್ಕೆ ಬಲಿಯಾಗುತ್ತಿದ್ದಾಳೆ. ಆಕೆಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದಾದರೆ ಪ್ರಧಾನಿ ಮೋದಿಯವರಿಗೆ ಸಂದೇಶ ರವಾನೆ ಮಾಡಿ ರಕ್ಷಣೆ ಪಡೆಯಲಿ ಎಂದರು.

ಯುವತಿಗೆ ರಕ್ಷಣೆ ನೀಡಲು ರಾಜ್ಯ ಮಹಿಳಾ ಆಯೋಗ ಬದ್ಧ: ಪ್ರಮೀಳಾ ನಾಯ್ಡು

ಇಲ್ಲವೇ ಆಕೆಗೆ ಯಾರ ಮೇಲೆ ನಂಬಿಕೆಯಿದೆ ? ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ, ಮಹಿಳಾ ಸಂಘಟನೆ ಮೇಲೆ ಇಲ್ಲ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಿ ರಕ್ಷಣೆ ಪಡೆಯಲಿ. ಎಲ್ಲಿಯೋ ಕುಳಿತು ಯಾರದೋ ಒತ್ತಡಕ್ಕೆ ಭಯದಿಂದ ವಿಡಿಯೋ ಬಿಡುಗಡೆ ಮಾಡುವ ಬದಲು ಮೊದಲು ರಕ್ಷಣೆ ಪಡೆದು ಹೇಳಿಕೆಗಳನ್ನು ನೀಡಲಿ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: