alex Certify ಬಂಡೆಗೆ ಡಿಕ್ಕಿ ಹೊಡೆದ 7 ಮೀನುಗಾರರಿದ್ದ ದೋಣಿ; ಪ್ರಾಣಾಪಾಯದಿಂದ ಪಾರಾಗಿದ್ದೇ ಪವಾಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಡೆಗೆ ಡಿಕ್ಕಿ ಹೊಡೆದ 7 ಮೀನುಗಾರರಿದ್ದ ದೋಣಿ; ಪ್ರಾಣಾಪಾಯದಿಂದ ಪಾರಾಗಿದ್ದೇ ಪವಾಡ

ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ಹೊರಟಿದ್ದಾಗ ಏಳು ಮೀನುಗಾರರಿದ್ದ ದೋಣಿ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ . ಬೋಟ್‌ನಲ್ಲಿದ್ದ ಎಲ್ಲಾ ಏಳು ಮೀನುಗಾರರನ್ನು ಸೋಮವಾರ ಮತ್ತೊಂದು ಹಡಗಿನ ಮೀನುಗಾರರು ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಡುಪಿಯ ರಾಹಿಲ್ ಎಂಬುವರಿಗೆ ಸೇರಿದ ದೋಣಿಯಾಗಿದ್ದು, ಮೇ 21ರಂದು ರಾತ್ರಿ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು.

ಭಟ್ಕಳ ಸಮೀಪಕ್ಕೆ ಬಂದ ಬೋಟ್ ಭಾರೀ ಮಳೆಗೆ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ. ದೋಣಿಯೊಳಗೆ ನೀರು ಪ್ರವೇಶಿಸಲು ಪ್ರಾರಂಭಿಸಿದಾಗ, ಮತ್ತೊಂದು ಹಡಗಿನ ಮೀನುಗಾರರು ಸಹಾಯಕ್ಕಾಗಿ ಧಾವಿಸಿದರು. ಆರಂಭದಲ್ಲಿ ಹಗ್ಗವನ್ನು ಬಳಸಿ ದೋಣಿಯನ್ನು ಮೇಲೆತ್ತಲು ಪ್ರಯತ್ನಿಸಲಾಯಿತು.

ಆದರೆ ಹಗ್ಗ ತುಂಡಾಗಿ ದೋಣಿ ಮುಳುಗಿತು. ಬಳಿಕ ಎಲ್ಲ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಯಿತು. ಘಟನೆಯಲ್ಲಿ 45 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...