alex Certify BIG NEWS : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೆ.ಸುಧಾಕರ್ ‘ಕಾಂಗ್ರೆಸ್’ ಟಿಕೆಟ್ ಕೇಳಿದ್ದಾರೆ : ಶಾಸಕ ಪ್ರದೀಪ್ ಈಶ್ವರ್ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೆ.ಸುಧಾಕರ್ ‘ಕಾಂಗ್ರೆಸ್’ ಟಿಕೆಟ್ ಕೇಳಿದ್ದಾರೆ : ಶಾಸಕ ಪ್ರದೀಪ್ ಈಶ್ವರ್ ಬಾಂಬ್

ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೆ.ಸುಧಾಕರ್ ‘ಕಾಂಗ್ರೆಸ್’ ಟಿಕೆಟ್ ಕೇಳಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಬಾಂಬ್ ಸಿಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಸುಧಾಕರ್ ಈಗಾಗಲೇ ಕಾಂಗ್ರೆಸ್ ಕದ ತಟ್ಟಿದ್ದಾರೆ, ಆದ್ರೆ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದರು. ಸುಧಾಕರ್ ಒಂದು ಸಲ ಕಾಂಗ್ರೆಸ್ ಗೆ ಮೋಸ ಮಾಡಿ ಬಿಜೆಪಿ ಸೇರಿದ್ದಾರೆ, ಇದೀಗ ಲೋಕಸಭೆಗೆ ಸ್ಪರ್ಧಿಸಲು ಮಾಜಿ ಸಚಿವ ಕೆ.ಸುಧಾಕರ್ ‘ಕಾಂಗ್ರೆಸ್’ ಟಿಕೆಟ್ ಕೇಳಿದ್ದಾರೆ . ಕೋವಿಡ್ ಹಗರಣದಿಂದ ಬಚಾವ್ ಆಗಲು ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಸುಧಾಕರ್ ಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲವೇ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ವಿರುದ್ಧ ಸ್ಪರ್ಧಿಸಿ ಪ್ರದೀಪ್ ಈಶ್ವರ್ ಗೆದ್ದಿದ್ದರು. ಇತ್ತೀಚೆಗೆ ಕೋವಿಡ್ ಹಗರಣ ಸಂಬಂಧ ಇಬ್ಬರ ನಡುವೆ ಭಾರಿ ವಾಕ್ಸಮರಗಳು ನಡೆದಿದ್ದವು. ಕೋವಿಡ್ ವೇಳೆ ಹಗರಣ ನಡೆದಿಲ್ಲ ಎಂದು ದೀಪ ಹಚ್ಚುವಂತೆ ಪ್ರದೀಪ್ ಸುಧಾಕರ್ ಗೆ ಸವಾಲು ಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...