
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು, ಇನ್ಮೇಲೆ ಇದು ಕಾರ್ಯಚರಣೆಗೆ ಬರಲಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಹಣಕಾಸು ಕಾಯಿದೆ, 2021 ರ ಮೂಲಕ ಆದಾಯ ತೆರಿಗೆ ಕಾಯಿದೆಯಲ್ಲಿ ಈ ಬದಲಾವಣೆ ತರಲಾಗಿದೆ. ಪಿಂಚಣಿ ಪಡೆಯುವ ಬ್ಯಾಂಕ್ನಲ್ಲಿ ನಿರ್ವಹಿಸುವ ಖಾತೆಗಳಿಂದ ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಮಾತ್ರ ಹೊಂದಿರುವ ದೇಶದ ಅತ್ಯಂತ ಹಿರಿಯ ನಾಗರಿಕರಿಗೆ, ಇನ್ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಕಟ್ಟುವ ಯೋಚನೆ ಇರುವುದಿಲ್ಲ.
ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ, ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ನಲ್ಲಿ ಹೇಳಿದ್ದರು. 2022ರ ಶುರುವಿನಲ್ಲೆ ಈ ಮಾತನ್ನ ಸಾಕಾರಗೊಳಿಸಿದ್ದಾರೆ.