alex Certify ಯಾವ ರೀತಿಯ ‘ಸಿನಿಮಾ’ ಮಾಡಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು: ಜಾವೇದ್ ಅಖ್ತರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ರೀತಿಯ ‘ಸಿನಿಮಾ’ ಮಾಡಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು: ಜಾವೇದ್ ಅಖ್ತರ್

ಭಾರತೀಯ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಬದಲಾವಣೆಗಳು ಆಗಿದೆ, ಜನರಿಗಾಗಿ ಯಾವ ರೀತಿಯ ಚಲನಚಿತ್ರಗಳನ್ನು ಮಾಡಬೇಕೆಂದು ನಿರ್ಧರಿಸುವುದು ನಿರ್ದೇಶಕರಿಗೆ ಬಿಟ್ಟದ್ದು ಎಂದು ಹಿರಿಯ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಬುಧವಾರ ಹೇಳಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಮಧ್ಯ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ 9 ನೇ ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

“ನಾವು ಚಿತ್ರಮಂದಿರಗಳನ್ನು ನಿರ್ಮಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ ಭವಿಷ್ಯದ ರೈಲು ಹತ್ತುವಾಗ, ನಾವು ಪ್ಲಾಟ್ ಫಾರ್ಮ್ ನಲ್ಲಿ ಸಾಕಷ್ಟು ಸರಕುಗಳನ್ನು ಬಿಟ್ಟಿದ್ದೇವೆ. ಭಾಷೆ, ಸಾಹಿತ್ಯ, ಶಾಸ್ತ್ರೀಯ ಸಂಗೀತ ಹಿಂದುಳಿದಿವೆ ಎಂದರು. ತಮ್ಮ ಕೆಲಸದ ಬಗ್ಗೆ ಮಾತನಾಡಿದ ಅಖ್ತರ್, ಅವರು ಸಿನಿಮಾದ ಸ್ಕ್ರಿಪ್ಟ್ಗಳನ್ನು ಬರೆಯುವಾಗ ಆರ್ಥಿಕ ಅಥವಾ ಸಾಮಾಜಿಕ ಪರಿಣಾಮದ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಎಂದು ಹೇಳಿದರು.
“ಒಂದು ಕಾಲದಲ್ಲಿ ಚಿತ್ರದ ನಾಯಕನು ತನ್ನ ಆಯ್ಕೆಯ ಹುಡುಗಿಯನ್ನು ಮದುವೆಯಾಗಲು ತನ್ನ ಹೆತ್ತವರ ವಿರುದ್ಧ ದಂಗೆ ಏಳುತ್ತಿದ್ದನು. ನಂತರ, ಚಿತ್ರಗಳಲ್ಲಿ ಸಾಮಾಜಿಕ ಅಸಮಾನತೆ, ಕಾನೂನು, ನ್ಯಾಯಾಲಯಗಳು ಮತ್ತು ಅಸಂವಿಧಾನಿಕ ವಿಷಯಗಳನ್ನು ತೋರಿಸಲಾಗುತ್ತಿತ್ತು.

ಯಾವ ರೀತಿಯ ಚಲನಚಿತ್ರಗಳನ್ನು ಮಾಡಬೇಕೆಂದು ನಿರ್ಧರಿಸುವುದು ನಿರ್ದೇಶಕರಿಗೆ ಬಿಟ್ಟದ್ದು, ಎಂತಹ ಸಿನಿಮಾಗಳನ್ನು ಮಾಡಬೇಕು ಎಂದು ನಿರ್ದೇಶಕರು ನಿರ್ಧರಿಸಬೇಕು. ಉತ್ತಮ ಚಲನಚಿತ್ರಗಳನ್ನು ಜನರು ಸ್ವೀಕಾರ ಮಾಡುತ್ತಾರೆ, ಇದು ಚಲನಚಿತ್ರೋದ್ಯಮವನ್ನು ಬಲಪಡಿಸುತ್ತವೆ ಎಂದು ಅಖ್ತರ್ ಹೇಳಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...