alex Certify ಭ್ರಷ್ಟಾಚಾರದಲ್ಲಿ ನಂ.1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ ; ಸಿಎಂ ಸಿದ್ದರಾಮಯ್ಯ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟಾಚಾರದಲ್ಲಿ ನಂ.1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ ; ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು : ಭ್ರಷ್ಟಾಚಾರದಲ್ಲಿ ನಂ.1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್-ಬಿಜೆಪಿಯಿಂದಲೇ ಭ್ರಹ್ಮಾಂಡ ಭ್ರಷ್ಟಾಚಾರ ಆರಂಭವಾಗಿದೆ. ಗಣಿಧಣಿಗಳನ್ನು ರಾಜಕೀಯಕ್ಕೆ ಕರೆತಂದು ರಾಜ್ಯಕೀಯ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ್ದೇ ಬಿಜೆಪಿ. ಇಡೀ ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ. ಐಟಿ, ಇಡಿ, ಸಿಬಿಐ ಅವರ ಮನೆಗಳಿಗೆ ಬರಲೇ ಇಲ್ಲ ಎಂಬ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿ ಶಾಸಕರು, ಕೇಂದ್ರ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು “ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳು ಮಾಡುತ್ತಿರುವ ಪಾದಯಾತ್ರೆ” ಎಂದು ಹೇಳಿದ್ದಾರೆ, ನಿಮಗೆ ನಾಚಿಕೆ ಆಗಬೇಕು. ನೀವು ಏನನ್ನು ಸಾಬೀತು ಮಾಡಲು ಹೊರಟಿದ್ದೀರಿ? ಅಸತ್ಯವನ್ನು ಸಾಬೀತುಮಾಡಲೊ, ಸತ್ಯವನ್ನು ಮರೆಮಾಚಲೊ? ಪಾದಯಾತ್ರೆ ಏಕೆ ಹೊರಟಿದ್ದೀರಿ? ಜೆಡಿಎಸ್ ಪಕ್ಷ ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ತಮ್ಮ ಜಾತ್ಯಾತೀತ ಸಿದ್ದಾಂತವನ್ನು ಬದಿಗೊತ್ತಿ, ಕೋಮುವಾದಿ ಪಕ್ಷದ ಜೊತೆಗೆ ಕೈಜೋಡಿಸಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ. ಇದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...