alex Certify ಯುಪಿಎಸ್ಸಿ ನಾಗರಿಕ ಸೇವೆಗಳಲ್ಲಿ 53ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಕನಸನ್ನು ನನಸಾಗಿಸಿಕೊಂಡ ಐಪಿಎಸ್ ಟ್ರೈನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿಎಸ್ಸಿ ನಾಗರಿಕ ಸೇವೆಗಳಲ್ಲಿ 53ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಕನಸನ್ನು ನನಸಾಗಿಸಿಕೊಂಡ ಐಪಿಎಸ್ ಟ್ರೈನಿ

ಐಪಿಎಸ್ ಟ್ರೈನಿಂಗ್ ಪಡೆದಿದ್ದ ಪ್ರತಿಭಾನ್ವಿತ ಯುವತಿಯೊಬ್ಬರು ಯುಪಿಎಸ್ ಸಿ ನಾಗರಿಕ ಸೇವೆಯಲ್ಲಿ 53ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಐಎಎಸ್ ಕನಸನ್ನು ನನಸಾಗಿಸಿದ್ದಾರೆ.

ಹೌದು, ಉತ್ತರಾಖಂಡದ ಚಮೋಲಿ ಜಿಲ್ಲೆಯ ಪ್ರತಿಭಾವಂತ ಯುವತಿ ಮುದ್ರಾ ಗೈರೋಲಾ ಅವರು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2023ರಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅತ್ಯುತ್ತಮ ಸಾಧನೆಯೊಂದಿಗೆ, ಮುದ್ರಾ ಅವರು ಐಎಎಸ್ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಗಳಿಸಿದರು.

ಈ ಹಿಂದೆ ಐಪಿಎಸ್ ತರಬೇತಿಗೆ ಆಯ್ಕೆಯಾಗಿದ್ದ ಅವರು, ಇದೀಗ ಯುಪಿಎಸ್‌ಸಿ ಸಿಎಸ್‌ಇಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮುದ್ರಾ ಗೈರೋಲಾ ಅವರ ಈ ಪ್ರಯಾಣವು ಅಪಾರ ಮನ್ನಣೆ ಮತ್ತು ಪ್ರಶಂಸೆಯನ್ನು ಗಳಿಸಿದೆ.

ಕನಸೊಂದು ಈಡೇರಿದೆ
ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕೆಂಬ ಬಲವಾದ ಬಯಕೆಯಿಂದ ಮುದ್ರಾ ಗೈರೋಲಾ ಅವರು ಚಿಕ್ಕ ವಯಸ್ಸಿನಲ್ಲಿಯೇ ನಾಗರಿಕ ಸೇವೆಗಳ ಬಗ್ಗೆ ಆಸಕ್ತಿ ಮೂಡಿತು.

2021 ರಲ್ಲಿ, ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಗಳಿಸಿದರು. ಹೈದರಾಬಾದ್‌ನ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ತರಬೇತಿ ಪಡೆದ್ರು. ಆದರೂ ತನ್ನ ಐಎಎಸ್ ಕನಸನ್ನು ಬಿಡಲಿಲ್ಲ.

ಕೊನೆಗೂ ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮುದ್ರಾ ಗೈರೋಲಾ ಅವರು ಯುಪಿಎಸ್ಸಿ 2023 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 53 ನೇ ರ್ಯಾಂಕ್ ಅನ್ನು ಪಡೆದುಕೊಂಡಿದ್ದಾರೆ.

ಮುದ್ರಾರ ಯಶಸ್ಸಿನ ಹಾದಿ:
ಮುದ್ರಾ ಅವರ ಶೈಕ್ಷಣಿಕ ಹಾದಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ. ತನ್ನ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 10 ನೇ ತರಗತಿಯಲ್ಲಿ ಶೇ. 96 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ. 97 ಅಂಕಗಳನ್ನು ಪಡೆದಿದ್ದಾರೆ.

ತನ್ನ ಶಾಲಾ, ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮುದ್ರಾ ಬಿಡಿಎಸ್ ನಲ್ಲಿ ಪದವಿಯನ್ನು ಪಡೆದರು. ಅವರ ಅಸಾಧಾರಣ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದರು. ದಂತವೈದ್ಯಕೀಯ ಕ್ಷೇತ್ರದಲ್ಲಿ ಆಕೆಯ ಸಾಧನೆಗಳ ಹೊರತಾಗಿಯೂ, ಮುದ್ರಾ ಅವರ ನಾಗರಿಕ ಸೇವೆಗಳ ಉತ್ಸಾಹವು ತನ್ನ ಯುಪಿಎಸ್ಸಿ ಪ್ರಯಾಣವನ್ನು ಪ್ರಾರಂಭಿಸಲು ಕಾರಣವಾಯಿತು.

ಕುಟುಂಬದ ಬೆಂಬಲ ಮತ್ತು ಸ್ಫೂರ್ತಿ:
ಮುದ್ರಾ ಗೈರೋಲಾ ಯಶಸ್ಸಿಗೆ ಅವರ ಕುಟುಂಬವು ನೀಡಿದ ಅಚಲ ಬೆಂಬಲ ಮತ್ತು ಸ್ಫೂರ್ತಿಗೆ ಸಾಕ್ಷಿಯಾಗಿದೆ. ಆಕೆಯ ತಂದೆ ಅರುಣ್ ಗೈರೋಲಾ ಅವರು ನಾಗರಿಕ ಸೇವೆಗಳಿಗೆ ಸೇರುವ ತಮ್ಮದೇ ಆದ ಆಕಾಂಕ್ಷೆಗಳನ್ನು ಹೊಂದಿದ್ದರು. ಆದರೆ, ಅದನ್ನು ಪೂರೈಸಲು ಅವರಿಗೆ ಸಾಧ್ಯವಾಗಿರಲಿಲ್ಲ. ತನಗೆ ಸಾಧ್ಯವಾಗದ ಕ್ಷೇತ್ರದಲ್ಲಿ ತನ್ನ ಮಕ್ಕಳು ಯಶಸ್ವಿಯಾಗುವುದನ್ನು ನೋಡಬೇಕೆಂಬ ಅರುಣ್ ಗೈರೋಲಾ ಅವರ ಸಂಕಲ್ಪ ಮುದ್ರಾ ಅವರ ಐಎಎಸ್ ಪಯಣವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಂದೆಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಮುದ್ರಾ ಅವರು ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...