alex Certify ಕೊರೊನಾ ಸಂಕಷ್ಟದ ಮಧ್ಯೆ ಇಲ್ಲಿದೆ ಒಂದು ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ಮಧ್ಯೆ ಇಲ್ಲಿದೆ ಒಂದು ಖುಷಿ ಸುದ್ದಿ

ತೀವ್ರ ಪರಿಣಾಮ ಬೀರದ ಲಘು ಕೊರೋನಾ ಸೋಂಕು ಮತ್ತು ಲಕ್ಷಣರಹಿತರಲ್ಲೂ ಮೂರ್ನಾಲ್ಕು ತಿಂಗಳ ನಂತರ ಟಿ ಸೆಲ್ ಹಾಗೂ ಪ್ರತಿಕಾಯ ಕಾಣಿಸಿಕೊಂಡಿದ್ದು, ವೈರಾಣುವಿನ ವಿರುದ್ಧ ನಿರೋಧಕ ಶಕ್ತಿ ಹೆಚ್ಚಿಸಿರುವುದು ಪತ್ತೆಯಾಗಿದೆ.

ಲಘು ಮತ್ತು ಲಕ್ಷಣರಹಿತ ಸೋಂಕಿನ ಕುರಿತು ನಡೆದ ಅಧ್ಯಯನದ ವೇಳೆ ಈ ಸಂಗತಿ ಬೆಳಕಿಗೆ ಬಂದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಜೋಸೆಫ್ ಗಿಬ್ಬನ್ ಅವರು ಈ ಕುರಿತು ಖುಷಿ ಹಂಚಿಕೊಂಡಿದ್ದು, ಸೋಂಕಿತ ಆರೋಗ್ಯ ಕಾರ್ಯಕರ್ತರನ್ನು 16-18 ವಾರಗಳ ನಂತರ ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಪೈಕಿ ಶೇ.89 ರಷ್ಟು ಮಂದಿಯಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಅಲ್ಲದೆ, ಬಿಳಿ ರಕ್ತಕಣಗಳು ವೃದ್ಧಿಯಾಗಿವೆ. ಲಸಿಕೆಯು ಶಾಶ್ವತ ಪರಿಣಾಮ ಬೀರಬಲ್ಲದು ಎಂಬುದೂ ನಿರೂಪಿತವಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...