alex Certify SHOCKING: ರಜೆ ಸಿಗುತ್ತೆ ಎಂದು ಸಹಪಾಠಿಯನ್ನೇ ಕೊಂದ ಸ್ನೇಹಿತರು: ಕ್ರೈಮ್ ಶೋ ನೋಡಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಜೆ ಸಿಗುತ್ತೆ ಎಂದು ಸಹಪಾಠಿಯನ್ನೇ ಕೊಂದ ಸ್ನೇಹಿತರು: ಕ್ರೈಮ್ ಶೋ ನೋಡಿ ಕೃತ್ಯ

ನವದೆಹಲಿ: ಈಶಾನ್ಯ ದಿಲ್ಲಿಯ ಮದರಸಾವೊಂದರಲ್ಲಿ ಐದು ವರ್ಷದ ಬಾಲಕನನ್ನು ಮೂವರು ಸಹ ವಿದ್ಯಾರ್ಥಿಗಳು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

9 ರಿಂದ 11 ವರ್ಷದೊಳಗಿನ ಮೂವರು ಆರೋಪಿಗಳು ಮದ್ರಸಾಕ್ಕೆ ರಜೆ ಕೊಡ್ತಾರೆ ಎಂದು ಬಯಸಿ ಈ ಅಪರಾಧ ಎಸಗಿದ್ದಾರೆ. ದೂರದರ್ಶನದಲ್ಲಿ ಕ್ರೈಂ ಶೋ ನೋಡಿ ಈ ರೀತಿ ಮಾಡಿದ್ದಾರೆ. ಕ್ರೈಮ್ ಶೋನಿಂದ ಪ್ರೇರಿತರಾಗಿ ಮದ್ರಸಾದಲ್ಲಿ 5 ವರ್ಷದ ಬಾಲಕನನ್ನು 3 ವಿದ್ಯಾರ್ಥಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ತಡರಾತ್ರಿ 10 ಗಂಟೆ ಸುಮಾರಿಗೆ ದೆಹಲಿಯ ದಯಾಲ್‌ಪುರ ಪ್ರದೇಶದ ಮದ್ರಸಾ ತಲೀಮುಲ್ ಖುರಾನ್‌ ನಿಂದ ಬಾಲಕನ ತಾಯಿ ಪೊಲೀಸರಿಗೆ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮದರಸಾದಲ್ಲಿ ಓದುತ್ತಿದ್ದ ತನ್ನ ಮಗ ಅಸ್ವಸ್ಥನಾಗಿದ್ದನೆಂದು ತಿಳಿಸಲಾಗಿದೆ. ಪೊಲೀಸರು ಆಗಮಿಸಿದಾಗ, ಬಾಲಕನ ಕುತ್ತಿಗೆ, ಬೆನ್ನು ಮತ್ತು ಸೊಂಟದ ಮೇಲೆ ಗುಳ್ಳೆಗಳು ಕಾಣಿಸಿಕೊಂಡವು.

ತಕ್ಷಣ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಆತನ ಸಾವಿನ ನಂತರ, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ದೈಹಿಕ ಹಲ್ಲೆಯಿಂದಾಗಿ ಬಾಲಕನಿಗೆ ತೀವ್ರ ಆಂತರಿಕ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಹುಡುಗನ ಸ್ನೇಹಿತರು ಮತ್ತು ಇತರ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಅಧಿಕಾರಿಗಳು 11 ವರ್ಷ ವಯಸ್ಸಿನ ಇಬ್ಬರು ಮತ್ತು 9 ವರ್ಷ ವಯಸ್ಸಿನ ಮೂವರು ಹುಡುಗರನ್ನು ಅಪರಾಧಿಗಳು ಎಂದು ಗುರುತಿಸಿದ್ದಾರೆ. ವಿಚಾರಣೆ ವೇಳೆ ಬಾಲಕರು ಮದರಸಾಕ್ಕೆ ರಜೆ ಸಿಗುತ್ತದೆ ಎಂಬ ಆಸೆಯಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೂವರು ಟಿವಿಯಲ್ಲಿ ವೀಕ್ಷಿಸಿದ ಅಪರಾಧ ಕಾರ್ಯಕ್ರಮದಿಂದ ಪ್ರಭಾವಿತರಾಗಿದ್ದರು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...