alex Certify ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ

ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಶಿಷ್ಟಾಚಾರಯುತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಯೋಗ, ಲಘು ವ್ಯಾಯಾಮ ಮುಂದುವರಿಸುವಂತೆ ಸಲಹೆಯಿತ್ತಿದೆ. ಅಷ್ಟೇ ಅಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅಗತ್ಯ ಮನೆಮದ್ದುಗಳನ್ನೂ ಆಯುಷ್ ಇಲಾಖೆ ಮೂಲಕ ಶಿಫಾರಸು ಮಾಡಿದೆ.

ಮಾಸ್ಕ್ ಧರಿಸುವುದು, ಶರೀರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಅಗತ್ಯವಿರುವಷ್ಟು ನಿಯಮಿತವಾಗಿ ಬಿಸಿ ನೀರು ಕುಡಿಯುವುದು, ಹಾಲಿಗೆ ಅರಿಷಿನ ಪುಡಿ ಹಾಕಿ ಬಿಸಿ ಮಾಡಿಕೊಂಡು ಕುಡಿಯುವುದು, ಕಷಾಯ ಬಳಸುವುದು, ಚ್ಯವನಪ್ರಾಶ ಸೇವಿಸುವುದು, ಯೋಗ, ಲಘು ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ವಾಯುವಿಹಾರ, ನಡಿಗೆ ಇತ್ಯಾದಿಗಳನ್ನು ಜೀವನ ಪದ್ಧತಿಯಲ್ಲಿ ನಿತ್ಯವೂ ಅಳವಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ಕೆಲಸ ಮಾಡಬೇಕು. ಕಚೇರಿಗೆ ಹೋಗದಿರುವುದು ಒಳಿತು ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...