alex Certify ‘ಕೊರೊನಾ’‌ ಕಂಟಕ ನಿವಾರಣೆಗೆ ಆನ್ ಲೈನ್ ಪೂಜೆ ಶುರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’‌ ಕಂಟಕ ನಿವಾರಣೆಗೆ ಆನ್ ಲೈನ್ ಪೂಜೆ ಶುರು…!

ನವದೆಹಲಿ: ಚೀನಾದಿಂದ ಹುಟ್ಟಿದ ಕೊರೊನಾ ವಿಶ್ವದ ನಾನಾ ದೇಶಗಳುಗೆ ಹರಡಿ ನರಕ ಸೃಷ್ಟಿಸಿದೆ. ಆರೋಗ್ಯದ ಭಯ ಒಂದೆಡೆಯಾದರೆ, ಲಾಕ್‌ಡೌನ್ ನಿಂದ ವ್ಯಾಪಾರ, ವಹಿವಾಟು ಕುಸಿದಿದೆ. ಉದ್ಯೋಗ ನಷ್ಟವಾಗಿದೆ. ‘ ‘ಸಂಕಟ ಕಾಲೆ ವೆಂಕಟರಮಣ ಧ್ಯಾನಂ’ ಎಂಬುದು ಭಾರತೀಯರ ಪರಿ. ದೇವರನ್ನು ನೆನೆದರೆ ಎಂಥ ದುರ್ಗತಿಯೂ ದೂರವಾಗುತ್ತದೆ ಎಂದು ಜನ ನಂಬುತ್ತಾರೆ.

ಜನರ ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕೊರೊನಾ ಕಾಲದಲ್ಲಿ ಆನ್ ಲೈನ್ ಪೂಜೆಗಳು ಹುಟ್ಟಿಕೊಂಡಿವೆ. ಶಕ್ತಿಪೀಠ ಡಿಜಿಟಲ್ ಎಂಬ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಆನ್ ಲೈನ್ ಪೂಜೆಯ ಮಾಹಿತಿಯನ್ನು ಜುಲೈ 11 ರಂದು ಹಂಚಿಕೊಳ್ಳಲಾಗಿದೆ.

ದುರ್ಗಾ ದೇವಿಯನ್ನು ಆರಾಧಿಸಿದರೆ, ಕೊರೊನಾ‌ ಕಂಟಕ ನಿವಾರಣೆಯಾಗಲಿದೆ. 2100 ರೂ.ಮತ್ತು ಆನ್‌ಲೈನ್ ವೆಚ್ಚವಾಗಿ ಜಿ ಎಸ್ ಟಿ ಪಾವತಿಸಿದರೆ, ದುರ್ಗಾ ಸಪ್ತಶತಿ ಪಾಠ ಮಾಡಿ ಪ್ರಸಾದ ಕಳಿಸಲಾಗುವುದು. ಇದರಿಂದ ಕೊರೊನಾ ಕಂಟಕ‌ ನಿವಾರಣೆಯಾಗಲಿದೆ. ಆರೊಗ್ಯ ವೃದ್ಧಿಯಾಗಲಿದೆ.‌ ಧೀರ್ಘಾಯುಷ್ಯ ಲಭ್ಯವಾಗಲಿದ್ದು, ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ ಎಂದು‌ ಬರೆಯಲಾಗಿದೆ.

https://www.instagram.com/p/CCf0NnLJUHF/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Spar på pulveret og Opdagelsen af pandaen: En forvirrende 6 metoder til at løse et tilstoppet toilet på Kun én person med Kan du vaske to gange En gåde, der