alex Certify ಕೆಲಸ ಕಳೆದುಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್: ABVKY ಯೋಜನೆಯಡಿ ವೇತನ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕಳೆದುಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್: ABVKY ಯೋಜನೆಯಡಿ ವೇತನ ಪರಿಹಾರ

ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡವರಿಗೆ ವೇತನ ಪರಿಹಾರ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ನೌಕರರ ರಾಜ್ಯ ವಿಮಾ ನಿಗಮದಡಿ ನೊಂದಾಯಿತ ಉದ್ಯೋಗಿಗಳು ಕೆಲಸವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಆಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ(ABVKY) ಅಭಿಯಾನ ಆರಂಭಿಸಿದೆ. ನೌಕರರ ರಾಜ್ಯ ವಿಮಾ ನಿಗಮದಲ್ಲಿ ನೊಂದಾಯಿತ ಕಾರ್ಮಿಕರು ತಮ್ಮ ವೇತನದ ಶೇಕಡಾ 50 ರಷ್ಟನ್ನು ಮೂರು ತಿಂಗಳವರೆಗೆ ಪಡೆಯಬಹುದಾಗಿದೆ.

ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಅಭಿಯಾನ ಆರಂಭಿಸಲಾಗಿದ್ದು, ಕೆಲಸವನ್ನು ಪ್ರಾರಂಭಿಸಿದರು ಕೂಡ ನಿರುದ್ಯೋಗ ಪರಿಹಾರವಾಗಿ ವೇತನ ಪರಿಹಾರ ಪಡೆಯಲು ರಾಜ್ಯ ವಿಮಾ ನಿಗಮ 44 ಸಾವಿರ ಕೋಟಿ ರೂಪಾಯಿ ನೀಡಲು ಕ್ರಮ ಕೈಗೊಂಡಿದೆ.

ಹಿಂದೆಯೇ ಯೋಜನೆ ಜಾರಿಯಾಗಿದ್ದರೂ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸ್ಥಳಾಂತರಗೊಂಡವರಿಗೆ, ಕೆಲಸ ಕಳೆದುಕೊಂಡವರಿಗೆ ಯೋಜನೆಯಿಂದ ಅನುಕೂಲವಾಗುತ್ತದೆ. ಅನೇಕ ಫಲಾನುಭವಿಗಳು ಆಧಾರ್ ಸಂಪರ್ಕ ಹೊಂದಿಲ್ಲದ ಕಾರಣ ಅವರು ದಾಖಲೆಗಳನ್ನು ಭೌತಿಕವಾಗಿ ಸಲ್ಲಿಸುವ ಅಗತ್ಯವಿದೆ. ಕಾರ್ಮಿಕ ಸಚಿವಾಲಯ ಮತ್ತು ರಾಜ್ಯ ವಿಮಾ ನಿಗಮ ಯೋಜನೆಯನ್ನು ವಿಸ್ತರಿಸಲು ಆರಂಭಿಸಿದ್ದು ಪ್ರತಿದಿನ ಸುಮಾರು 400 ಕ್ಲೈಮ್ ಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...