alex Certify ಆನೆ ಮರಿಯನ್ನ ಹೆಗಲ ಮೇಲೆ ಹೊತ್ತ ಅರಣ್ಯ ಸಿಬ್ಬಂದಿ: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ಮರಿಯನ್ನ ಹೆಗಲ ಮೇಲೆ ಹೊತ್ತ ಅರಣ್ಯ ಸಿಬ್ಬಂದಿ: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ..!

2017ರ ಡಿಸೆಂಬರ್​ ತಿಂಗಳಿನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮೆಟ್ಟುಪಾಳಯಂ ಕಾಡಿನ ಕಾಲುವೆಯೊಂದರಲ್ಲಿ ಬಿದ್ದಿದ್ದ ಆನೆ ಮರಿಯೊಂದನ್ನ ರಕ್ಷಣೆ ಮಾಡಿದ್ದಾರೆ. ಆನೆ ಮರಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಬಂದು ತಾಯಿ ಆನೆಯ ಮಡಿಲಿಗೆ ಸೇರಿಸಿದ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ಪಳನಿಚಾಮಿ ಶರತ್​ಕುಮಾರ್​ ಎಂಬವರು ಈ ರಕ್ಷಣಾ ಕಾರ್ಯವನ್ನ ಮಾಡಿದ್ದರು.ಈ ಘಟನೆಯ ಬಳಿಕ ಶರತ್​ ಕುಮಾರ್​ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ವರ್ಷ ಈ ಫೋಟೋವನ್ನ ಐಎಫ್​ಎಸ್​ ಅಧಿಕಾರಿ ದೀಪಿಕಾ ಬಾಜಪೇಯಿ ಇನ್ನೊಮ್ಮೆ ಶೇರ್​ ಮಾಡಿದ್ದರು.

ಹಳೆಯ ಫೋಟೋ. ತಮಿಳುನಾಡಿನಲ್ಲಿ ಆನೆಯ ಮರಿಯನ್ನ ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿದ್ದ ವಿಡಿಯೋ ಭಾರೀ ಸುದ್ದಿ ಮಾಡಿತ್ತು. ಪಳನಿಚಾಮಿ ತಮ್ಮ ಹೆಗಲ ಮೇಲೆ ಆನೆಮರಿಯನ್ನ ಹೊತ್ತು ತಾಯಿಯ ಮಡಿಲಿಗೆ ಸೇರಿಸಿದ್ದರು ಎಂದು ಟ್ವೀಟಾಯಿಸಿದ್ದರು.

ಇದೀಗ ಈ ವಿಡಿಯೋವನ್ನ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಮತ್ತೊಮ್ಮೆ ಶೇರ್​ ಮಾಡಿದ್ದು ಈ ಮೂಲಕ ವಿಡಿಯೋ ಮತ್ತೆ ಸುದ್ದಿ ಮಾಡಿದೆ. ಕಾಲುವೆಯಲ್ಲಿ ಬಿದ್ದಿದ್ದ ಆನೆಮರಿ ಮಣ್ಣಿನ ರಾಶಿಯಲ್ಲಿ ಸಿಕ್ಕಿಕೊಂಡಿತ್ತು. ಪಳನಿಚಾಮಿ ಶರತ್​ಕುಮಾರ್​ ಆನೆ ಮರಿಯನ್ನ ಆನೆಗಳ ಹಿಂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟ್ವೀಟಾಯಿಸಿದ್ರು. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ.

https://twitter.com/i/status/1378721995764850699

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...