alex Certify ಅಚ್ಚರಿಯಾದರೂ ಇದು ಸತ್ಯ: ಅಪಘಾತದ ಕಾರಣಕ್ಕೆ ಉಳಿದಿದೆ ಯುವಕನ ಪ್ರಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ಸತ್ಯ: ಅಪಘಾತದ ಕಾರಣಕ್ಕೆ ಉಳಿದಿದೆ ಯುವಕನ ಪ್ರಾಣ

ಹಣೆಬರಹ ಗಟ್ಟಿಯಿದ್ದರೆ ಸಾವು ಅಷ್ಟು ಸುಲಭದಲ್ಲಿ ಹತ್ತಿರ ಸುಳಿಯುವುದಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸತ್ಯ ಮಾಡುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಯಂತ್ರಣ ತಪ್ಪಿದ JCB ಯಂತ್ರವೊಂದು ರಸ್ತೆ ಬದಿಯಲ್ಲಿ ಬೈಕ್‌ ಮೇಲೆ ಕುಳಿತಿದ್ದ ಯುವಕನೊಬ್ಬನಿಗೆ ಇನ್ನೇನು ಗುದ್ದಬೇಕು ಎನ್ನುವಷ್ಟರಲ್ಲಿ, ಆ JCBಗೆ ಮಹೀಂದ್ರಾ ಬೊಲೆರೋ ಕಾರು ಸರಿಯಾದ ಸಮಯದಲ್ಲಿ ಬಂದು ಗುದ್ದಿದೆ. ಈ ಮೂಲಕ ಆತನ ಪ್ರಾಣವು ಕೂದಲೆಳೆ ಅಂತರದಲ್ಲಿ ಉಳಿದಿದೆ.

ಈ ಅಪಘಾತದಿಂದ ಬೈಕ್‌ಗೂ ಸಹ ಅಲ್ಪಸ್ವಲ್ಪ ಏಟಾಗಿದೆ. ಪವಾಡಸದೃಶ ರೀತಿಯಲ್ಲಿ, ಬೊಲೆರೋ SUV ಓಡಿಸುತ್ತಿದ್ದ ಚಾಲಕನಿಗೂ ಸಹ ಯಾವುದೇ ಪೆಟ್ಟುಗಳಾಗಿಲ್ಲ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕಂಡ ಉದ್ಯಮಿ ಆಆನಂದ್ ಮಹೀಂದ್ರಾ, “ಆ ಮೋಟರ್‌ಸೈಕಲ್ ಸವಾರನನ್ನು ಕಾಪಾಡಲೆಂದೇ ಬೊಲೆರೋ ಆ ಜಾಗಕ್ಕೆ ಬಂದಿದೆ ಎನಿಸುತ್ತದೆ” ಎಂದು ತಮ್ಮ ಟ್ವಿಟರ್‌ನಲ್ಲಿ ಬರೆದು, ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...